ಮಹಾನಟಿ ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಕೀರ್ತಿ ಸುರೇಶ, ಇದೀಗ ಸ್ಟಾರ್ ನಟ ಪ್ರಿನ್ಸ್ ಮಹೇಶಬಾಬು ಅವರ ಮಲತಾಯಿ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ ಅಂತಾ ಹೇಳಲಾಗ್ತಿದೆ. ಗಿನ್ನಿಸ್ ದಾಖಲೆ ಮಾಡಿರುವ ನಿರ್ದೇಶಕಿ ವಿಜಯನಿರ್ಮಲಾ ಅವರ ಜೀವನಾಧರಿತ ಚಿತ್ರದಲ್ಲಿ ನಟಿ ಕೀರ್ತಿ ನಟಿಸ್ತಿದ್ದಾರೆ ಎನ್ನಲಾಗ್ತಿದೆ.
ತೆಲುಗು ಸಿನಿ ಅಂಗಳದ ಸೂಪರ್ ಸ್ಟಾರ್ ನಟ ಮಹೇಶಬಾಬು ಅವರ ಮಲತಾಯಿ ಆಗಿದ್ದಾರೆ. ನಟ ಕೃಷ್ಣಮೂರ್ತಿ ಅವರನ್ನ ಮದ್ವೆಯಾಗಿದ್ದ ವಿಜಯನಿರ್ಮಲಾ ಅವರಿಗೆ ನರೇಶ ಅನ್ನೋ ಮಗ ಜನಿಸಿದ. ಮುಂದೆ ಕೃಷ್ಣಮೂರ್ತಿಗೆ ಡಿವೋರ್ಸ್ ನೀಡಿ ಕೃಷ್ಣ ಅವರನ್ನ ಮದ್ವೆಯಾದ್ರು. ಇವರಿಗೆ ಮೊದಲ ಪತ್ನಿಯಿಂದ ನಟ ಮಹೇಶಬಾಬು ಸೇರಿ ಐವರು ಮಕ್ಕಳಿದ್ದಾರೆ.
ಅಂದ್ಹಾಗೆ ಈ ಚಿತ್ರವನ್ನ ತೆರೆಗೆ ತರುವ ಪ್ಲಾನ್ ಮಾಡಿದವರು ವಿಜಯನಿರ್ಮಲಾ ಅವರ ಮಗ ನರೇಶ. ಹೀಗಾಗಿ ನಟಿ ಕೀರ್ತಿ ಸುರೇಶ ಸಂಪರ್ಕಿಸಿದ್ದು ವಿಡಿಯೋ ಕಾಲ್ ಮೂಲಕ ಸ್ಕ್ರಿಪ್ಟ್ ಬಗ್ಗೆ ಚರ್ಚಿಸಿದ್ದಾರೆ. ಖ್ಯಾತ ನಟಿ ಸಾವಿತ್ರಿ ಗಣೇಶನ್ ಅವರ ಜೀವನಾಧರಿತ ಚಿತ್ರದಲ್ಲಿ ನಟಿಸಿದ್ದ ಕೀರ್ತಿ, ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.
ನಿರ್ದೇಶಕ ವಿಜಯನಿರ್ಮಲಾ ಅವರು 44 ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ಇಡೀ ವಿಶ್ವದಲ್ಲಿ ಮಹಿಳೆಯೊಬ್ಬರು ಇಷ್ಟೊಂದು ಚಿತ್ರವನ್ನ ನಿರ್ದೇಶನ ಮಾಡಿದ ದಾಖಲೆ ಇಲ್ಲ. ಇದು ಗಿನ್ನಿಸ್ ರೆಕಾರ್ಡ್ ಆಗಿದೆ. ಅಲ್ದೇ, ತಮಿಳು ತೆಲುಗು, ಮಲಿಯಾಳಂನಲ್ಲಿ 250 ಚಿತ್ರಗಳಲ್ಲಿ ನಟಿಸಿದ್ದಾರೆ. 1971ರಿಂದ ಮೀನಾ ಚಿತ್ರದ ಮೂಲಕ ನಿರ್ದೇಶನ ಶುರು ಮಾಡಿದ್ರು. 2009ರ ವರೆಗೂ ಈ 3 ಭಾಷೆಗಳಲ್ಲಿ 44 ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.