ನವದೆಹಲಿ: ಈಗಾಗ್ಲೇ ಕರೋನಾದಿಂದ ಇಡೀ ಭಾರತ ಏಪ್ರಿಲ್ 21ರ ತನಕ ಲಾಕ್ ಡೌನ್ ಆಗಿದೆ. ಇದ್ರಿಂದಾಗಿ ಜನಸಾಮಾನ್ಯರ ಬದುಕು ಸಾಕಷ್ಟು ಹೈರಾಣಾಗಿದೆ. ಇದ್ರಿಂದಾಗಿ ಕೇಂದ್ರ ಸರ್ಕಾರ, 80 ಕೋಟಿ ಭಾರತೀಯರಿಗೆ ಅತ್ಯಂತ ಕಡಿಮೆ ದರದಲ್ಲಿ ಅಕ್ಕಿ, ಗೋಧಿ ನೀಡಲು ಮುಂದಾಗಿದೆಯಂತೆ.
ಕೇಂದ್ರ ಸಚಿವ ಪ್ರಕಾಶ ಜಾವೇಡ್ಕರ್ ಈ ಬಗ್ಗೆ ಮಾತ್ನಾಡಿದ್ದು, ಒಂದು ಕೆಜಿ ಅಕ್ಕಿ 3 ರೂಪಾಯಿ ಹಾಗೂ ಗೋಧಿ 2 ರೂಪಾಯಿ ದರದಲ್ಲಿ ನೀಡಲು ಮುಂದಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಅಕ್ರಮವಾಗಿ ದಾಸ್ತಾನು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಕರೋನಾಗೆ ಸಂಬಂಧಪಟ್ಟಂತೆ ಎಲ್ಲ ಜಿಲ್ಲೆಗಳಲ್ಲಿ ಸಹಾಯವಾಣಿ ತೆರೆಯಲಾಗುವುದು. ಇದರ ಜೊತೆಗೆ ದಿನಬಳಕೆ ವಸ್ತುಗಳು ಎಂದಿನಂತೆ ಸಿಗಲಿವೆ ಎಂದು ಹೇಳಿದ್ದು, ಜನರಲ್ಲಿ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.