ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ ಕರೋನಾ ಪರಿಹಾರ ನಿಧಿಗೆ 4 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಪಿಎಂ ಪರಿಹಾರ ನಿಧಿಗೆ 3 ಕೋಟಿ ಹಾಗೂ ಆಂಧ್ರ ಮತ್ತು ತೆಲಂಗಾಣ ಸಿಎಂ ಪರಿಹಾರ ನಿಧಿಗೆ ತಲಾ 50 ಲಕ್ಷ ನೀಡಲು ಮುಂದೆ ಬಂದಿದ್ದಾರೆ.
ಈ ಬಗ್ಗೆ ತೆಲುಗು ಸಿನಿ ದುನಿಯಾದ ಹಿರಿಯರೊಬ್ಬರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಯೂರೋಪ್ ನಲ್ಲಿ ನಡೆಯುತ್ತಿದ್ದ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ನಟ ಪ್ರಭಾಸ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.
ಇನ್ನು ಪವನ ಕಲ್ಯಾಣ 2 ಕೋಟಿ, ಚಿರಂಜೀವಿ 1 ಕೋಟಿ, ರಾಮ ಚರಣ 70 ಲಕ್ಷ, ಅಲ್ಲು ಅರ್ಜುನ 1.25 ಕೋಟಿ ರೂಪಾಯಿ ತೆಲಂಗಾಣ, ಆಂಧ್ರ ಹಾಗೂ ಕೇರಳ ಸರ್ಕಾರಕ್ಕೆ ನೀಡಿದ್ದಾರೆ. ತಮಿಳು ಸೂಪರ್ ಸ್ಟಾರ್ ಕಮಲ ಹಾಸನ್ ಅವರದೊಂದು ಬಂಗಲೆ ತಾತ್ಕಾಲಿಕ ಆಸ್ಪತ್ರೆ ಮಾಡಿಕೊಳ್ಳಿ ಎಂದಿದ್ದಾರೆ. ಬ್ಯಾಡ್ಮಿಟನ್ ತಾರೆ ಪಿ.ವಿ ಸಿಂಧು 10 ಲಕ್ಷ ನೀಡಿದ್ದಾರೆ. ಹೀಗೆ ಇನ್ನು ಅನೇಕರು ಕರೋನಾ ಪರಿಹಾರ ನಿಧಿಗೆ ಹಣ ನೀಡಲು ಮುಂದೆ ಬರ್ತಿರುವುದು ಸಂತಸದ ವಿಷಯ.