ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ಪೊಲೀಸ್ ಇಲಾಖೆಗೆ ಕರೋನಾ ಕಂಟಕ ಶುರುವಾಗಿದೆ. ಹೀಗಾಗಿ ಒಂದಾದ್ಮೇಲೆ ಸ್ಟೇಷನ್ ಸೀಲ್ ಡೌನ್ ಮಾಡಲಾಗ್ತಿದೆ. ಇಂದು ಮತ್ತೆ ಮೂರು ಸ್ಟೇಷನ್ ಸೀಲ್ ಡೌನ್ ಆಗಿವೆ.
ನಗರದ ಜಲನಗರ, ಎನ್ ಟಪಿಸಿ ಹಾಗೂ ಬಸವನಬಾಗೇವಾಡಿಯ ಪೊಲೀಸ್ ಠಾಣೆಯನ್ನ ಸೀಲ್ ಡೌನ್ ಮಾಡಲಾಗಿದೆ. ಇದ್ರಿಂದಾಗಿ ಖಾಕಿ ಪಡೆಗೆ ಕೋವಿಡ್ 19 ಭಯ ಆವರಿಸಿಕೊಂಡಿದೆ.
ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಮೂಡಿರುವ ಕರೋನಾ ಆತಂಕ ದೂರ ಮಾಡಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ.