ಲಖನೌ: ಮಾರಕ ಕರೋನಾ ಅನ್ನೋದು ಯಾರನ್ನೂ ಬಿಡ್ತಿಲ್ಲ. ಇದಕ್ಕೆ ಯಾವುದೇ ಬೇಧಭಾವ ಇಲ್ಲ. ಹೀಗಾಗಿ ಎಳೆಕೂಸಿನಿಂದ ಹಿಡಿದು ಹಿರಿಯ ಜೀವಗಳ ತನಕ ಜೀವ ತೆಗೆದು ಬಿಡುತ್ತೆ. ಇದಕ್ಕೆ 10 ತಿಂಗಳು ಹಸುಗುಸು ಬಲಿಯಾಗಿದೆ.
ಸಿದ್ಧಾರ್ಥನಗರ ಜಿಲ್ಲೆಯ ಚೌರಾಸಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಗು ಸಾವನ್ನಪ್ಪಿದೆ. ರಾಜೇಂದ್ರ ಪ್ರಸಾದ ಎಂಬುವರ ಹೆಣ್ಣುಕೂಸು ಸಾವನ್ನಪ್ಪಿದೆ. ಗುರುವಾರ ಸಂಜೆ ಅನಾರೋಗ್ಯ ಕಾಣಿಸಿಕೊಂಡಿದೆ. ಶುಕ್ರವಾರ ಮೈಮೇಲೆ ದಡಾರ ರೀತಿಯ ಲಕ್ಷಣಗಳು ಕಂಡು ಬಂದಿದ್ವು. ಹೀಗಾಗಿ ತಕ್ಷಣ ಉಸ್ಕಾ ಬಜಾರ್ ಪ್ರದೇಶದಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ.
ಉತ್ತರ ಪ್ರದೇಶದಲ್ಲಿ ಇದುವರೆಗೂ ಐವರು ಕರೋನಾಗೆ ಬಲಿಯಾಗಿದ್ದಾರೆ. ಮಗುವೊಂದು ಸಾವನ್ನಪ್ಪಿರುವುದು ಇದೆ ಮೊದಲು. ಈ ಘಟನೆ ನಿಜಕ್ಕೂ ಹೃದಯವಿದ್ರಾವಕವಾಗಿದೆ.