ಪ್ರಜಾಸ್ತ್ರ ಕ್ರೀಡಾ ಸುದ್ದಿ
ಮುಂಬೈ: ಭಾರತಕ್ಕೆ ಮೊದಲ ಬಾರಿಗೆ ವಿಶ್ವ ಕಪ್ ತಂದು ಕೊಟ್ಟ ನಾಯಕ ಕಪಿಲ್ ದೇವ್, ಐಸಿಸಿ ಟಿ-20 ವರ್ಲ್ಡ್ ಕಪ್ 2021ರಿಂದ ಟೀಂ ಇಂಡಿಯಾ ನಾಕೌಟ್ ಹಂತದಲ್ಲೇ ಹೊರ ಬಂದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರಿಗೆ ದೇಶಕ್ಕಿಂತ ಐಪಿಎಲ್ ಮುಖ್ಯವಾಗಿದೆ ಎಂದು ಕಿಡಿ ಕಾರಿದ್ದಾರೆ.
ಐಪಿಎಲ್ 2ನೇ ಹಂತ ಮುಗಿದ ನಂತರ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ಬೇಕಿತ್ತು. ಅದು ಭಾರತೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಉತ್ತಮ ರೀತಿಯಲ್ಲಿ ಯೋಜಿಸಬೇಕು ಎಂದು ಬಿಸಿಸಿಗೆ ಒತ್ತಾಯಿಸಿದರು. ನಾನು ಐಪಿಎಲ್ ನಲ್ಲಿ ಆಡಬೇಡಿ ಎಂದು ಹೇಳುತ್ತಿಲ್ಲ. ಮೊದಲು ದೇಶದ ತಂಡ, ನಂತರ ಫ್ರಾಂಚೈಸಿಗಳು ಅಂತಾ ಕಿವಿ ಮಾತು ಹೇಳಿದರು.