ಪ್ರಜಾಸ್ತ್ರ ಕ್ರೀಡಾ ಸುದ್ದಿ
ಟೀಂ ಇಂಡಿಯಾದ ದಿನೇಶ್ ಕಾರ್ತಿಕ್ ಸಧ್ಯ ಸೌಥ್ ಆಫ್ರಿಕಾ ವಿರುದ್ಧ ಆಡುತ್ತಿರುವ ಆಟಗಾರರಲ್ಲಿ ಹಿರಿಯ ಹಾಗೂ ಅನುಭವಿ ಆಟಗಾರ. 37 ವರ್ಷದ ಡಿಕೆಗೆ ಟೀಂ ಇಂಡಿಯಾದಲ್ಲಿ ಮತ್ತೆ ಮತ್ತೆ ಅವಮಾನ ಮಾಡಲಾಗುತ್ತಿದೆ ಅನ್ನೋದಕ್ಕೆ ಕಳೆದ ಎರಡು ಪಂದ್ಯಗಳು ಸಾಕ್ಷಿಯಾಗಿವೆ.
ಮೊದಲ ಪಂದ್ಯದಲ್ಲಿ ಮೊದಲ ಪಂದ್ಯದ 19ನೇ ಓವರ್ ನಲ್ಲಿ ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯೆ ಕ್ರಿಸ್ ನಲ್ಲಿದ್ದರು. 19.4 ಓವರ್ ನಲ್ಲಿ ಒಂದು ರನ್ ಗಳಿಸಿ ಕಾರ್ತಿಕಗೆ ಸ್ಟ್ರೈಕ್ ಕೊಡಬೇಕಾದ ಸಂದರ್ಭದಲ್ಲಿಯೂ ಪಾಂಡೆ ಅದನ್ನು ಮಾಡದೆ ನಾನ್ ಸ್ಟ್ರೈಕ್ ನಲ್ಲಿ ಉಳಿಯುವಂತೆ ಮಾಡಿದರು. ಈ ಬಗ್ಗೆ ಘಟಾನುಘಟಿ ಕ್ರಿಕೆಟ್ ಆಟಗಾರರು ಖಂಡಿಸಿದರು.
ಗುಜರಾತ್ ಟೈಟನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಸಹ ಪಾಂಡ್ಯ ವರ್ತನೆ ವಿರುದ್ಧ ನೇರವಾಗಿ ಕಾಡಿ ಕಾರಿದರು. ಕ್ರಿಸ್ ನಲ್ಲಿ ಇದ್ದಿದ್ದು ಕಾರ್ತಿಕ್, ಆಶಿಶ್ ಅಲ್ಲವೆಂದು ಹೇಳುವ ಮೂಲಕ ಗುಜರಾತ್ ತಂಡದ ನಾಯಕ ಪಾಂಡ್ಯೆಗೆ ಕುಟುಕಿದರು. ಇನ್ನು 2ನೇ ಪಂದ್ಯದಲ್ಲಿ 7ನೇ ಕ್ರಮಾದಲ್ಲಿ ಕಾರ್ತಿಕಗೆ ಅಂಗಳಕ್ಕೆ ಇಳಿಸಲಾಗಿದೆ. ಇವರಿಗೂ ಮೊದಲು ಅಕ್ಷರ್ ಪಟೇಲಗೆ ಕ್ರಿಸ್ ಗೆ ಬಿಡಲಾಗಿದೆ.
ದಿನೇಶ್ ಕಾರ್ತಿಕ್ ಸಾಮರ್ಥ್ಯ ಗೊತ್ತಿದ್ದರೂ ಈ ರೀತಿಯಾಗಿ ನಡೆದುಕೊಂಡಿದ್ದಕ್ಕೆ ಸೌಥ್ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್, ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಸಹ ಟೀಕಿಸಿದ್ದಾರೆ. ಅನುಭವಿ ಆಟಗಾರ ಇರುವಾಗ ಅದ್ಹೇಗೆ ಅಕ್ಷರ್ ಪಟೇಲ್ ಅನ್ನೋ ಬೌಲರ್ ನ್ನು ಕಳುಹಿಸುತ್ತೀರಿ ಎಂದು ಕಿಡಿ ಕಾರಿದ್ದಾರೆ. ಅದೇನೋ ಗೊತ್ತಿಲ್ಲ, ಕನ್ನಡಿಗ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಇರುವ ಟೀಂ ಇಂಡಿಯಾದಲ್ಲಿ ಇದ್ಯಾಕೆ ಹೀಗಾಗುತ್ತಿದೆ ಎಂದು ಕ್ರಿಕೆಟ್ ಪ್ರೇಮಿಗಳು ಪ್ರಶ್ನಿಸುತ್ತಿದ್ದು, ಇಂದು ಸಂಜೆ 7ಗಂಟೆಗೆ 3ನೇ ಪಂದ್ಯವಿದೆ.