ರಕ್ತದಾನ ಮಾಡಿ ತಾಯಿ, ಮಗುವಿನ ಜೀವ ಉಳಿಸಿದ ಮರ್ದಾನ್

197

ಪ್ರಜಾಸ್ತ್ರ ಸುದ್ದಿ

ಕುಷ್ಟಗಿ: ರಕ್ತದಾನ ಮಾಡಿ ತಾಯಿ, ಮಗುವಿನ ಜೀವ ಉಳಿಸುವ ಮೂಲಕ ಮರ್ದಾನ್ ಅನ್ನೋ ಯುವಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಕುಷ್ಟಗಿಯ ತೆಗ್ಗಿನ ಓಣಿಯ ಖಾಜಾಬಿ ಕನಕಗಿರಿ ಅವರಿಗೆ ಹೆರಿಗೆಯಾಗಿದ್ದು ಎಬಿ ನೆಗೆಟಿವ್ ರಕ್ತ 2 ಪಾಯಿಂಟ್ ಬೇಕಿತ್ತು. 1 ಪಾಯಿಂಟ್ ವ್ಯವಸ್ಥೆಯಾಗಿತ್ತು.

ಇನ್ನೊಂದು ಪಾಯಿಂಟ್ ರಕ್ತಕ್ಕಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಸೋಷಿಯಲ್ ಮೀಡಿಯಾದಲ್ಲಿ ಪ್ರಸ್ತಾಪಿಸಿದೆ. ಕೊಪ್ಪಳದಲ್ಲಿ ಗ್ಯಾರೇಜ್ ನಲ್ಲಿ ಕೆಲಸ ಮಾಡುವ ಮರ್ದಾನ್ ಸ್ವಯಂ ಪ್ರೇರಿತರಾಗಿ ಜಿಲ್ಲಾಸ್ಪತ್ರೆಗೆ ಬಂದು ರಕ್ತದಾನ ಮಾಡಿದ್ದಾರೆ. ಇದರಿಂದಾಗಿ ತಾಯಿ, ಮಗುವಿನ ಜೀವ ಉಳಿದಿದೆ. ಯವಕನ ನೆರವಿಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!