ಪ್ರಜಾಸ್ತ್ರ ಸದ್ದಿ
ಬೆಂಗಳೂರು: ತೀವ್ರ ಒತ್ತಡದಿಂದ ಹೃದಯಾಘಾತವಾಗಿ ಪತಿ ಸಾವನ್ನಪ್ಪಿದ್ದಾನೆ ಎಂದು ಇನ್ಸ್ ಪೆಕ್ಟರ್ ನಂದೀಶ್ ಪತ್ನಿ ಹೇಳಿದ್ದಾರೆ. ಈ ಪ್ರಕರಣ ಸಂಬಂಧ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಕೆ.ಆರ್ ಪುರ ಭಾಗದಲ್ಲಿ ಪಬ್ ಒಂದು ಇದ್ದು, ಅದು ಇನ್ಸ್ ಪೆಕ್ಟರ್ ನಂದೀಶ್ ವ್ಯಾಪ್ತಿಗೆ ಬರುತ್ತದೆ. ನಿಗದಿ ಸಮಯಕ್ಕಿಂತ ಹೆಚ್ಚು ಕಾಲ ಪಬ್ ಓಪನ್ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ನಂದೀಶ್ ಅಮಾನತು ಮಾಡಲಾಗಿತ್ತು ಎಂದಿದ್ದಾರೆ.
ಸರ್ಕಾರವೇ ರಾತ್ರಿ 1 ಗಂಟೆಯ ತನಕ ಪಬ್ ತೆರೆಯಲು ಅವಕಾಶ ನೀಡಿದೆ. ಹಾಗಾದರೆ ಪಬ್ ಎಷ್ಟು ಹೊತ್ತಿನವರೆಗೂ ಓಪನ್ ಇತ್ತು. ಅಲ್ಲಿ ಯಾರೆಲ್ಲ ಇದ್ದರು, ಪೊಲೀಸ್ ಅಧಿಕಾರಿ ಕೂಡಾ ಪಬ್ ನಲ್ಲಿ ಡ್ಯಾನ್ಸ್ ಮಾಡಿದ್ದಾರೆ ಅನ್ನೋದಿದೆ. ಅನಧಿಕೃತವಾಗಿ ಮಟ್ಕಾ, ಕ್ಯಾಸಿನೋ ದಂಧೆ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ ಎಂದಿದ್ದಾರೆ.
70-80 ಲಕ್ಷ ರೂಪಾಯಿ ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಂಡು ಬಂದಾಗ ಅವರು ಎಲ್ಲಿ ಹಣ ವಸೂಲಿ ಮಾಡಬೇಕು? ಇದು ಸರ್ಕಾರದ ನಡವಳಿಕೆಯಿಂದ ಆದ ಕಗ್ಗೊಲೆ ಎಂದು ಎಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.