ಪ್ರಜಾಸ್ತ್ರ ಸುದ್ದಿ
ವಿಜಯಪುರ: ನಗರದ ಹೋಟೆಲ್ ವೊಂದರಲ್ಲಿ ಇಬ್ಬರ ಶವಗಳು ಪತ್ತೆಯಾಗಿದ್ದು, ಇದು ಕೊಲೆಯೋ ಆತ್ಮಹತ್ಯೆಯೋ ಅನ್ನೋ ಅನುಮಾನ ಮೂಡಿದೆ. ರಕ್ತದ ಮಡುವಿನಲ್ಲಿ ಶವಗಳು ಪತ್ತೆಯಾಗಿದ್ದು, ಸಾಕಷ್ಟು ಅನುಮಾನ ಮೂಡಿಸಿವೆ.
ನಗರದ ರಾಜಧಾನಿ ಲಾಡ್ಜ್ ನ ರೂಮಿನಲ್ಲಿ ಬಳ್ಳಾರಿ ಮೂಲದ ಸಿ.ಇಂದ್ರಕುಮಾರ್ ಹಾಗೂ ಮತ್ತೊಬ್ಬನ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳನ್ನು ಮೂಡಿಸಿದೆ. ಗಾಂಧಿಚೌಕ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.