ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ನಿಜಕ್ಕೂ ದುರಂತ ಅಂದರೆ ಇದೆ ಇರಬೇಕು, ಶವಸಂಸ್ಕಾರಕ್ಕೆ ಹೊರಟವೆ ಅಪಘಾತದಲ್ಲಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 48 ಕಾತ್ರಾಳ್ ಕೆರೆ ಸೇತುವೆ ಹತ್ತಿರ ನಡೆದಿದೆ. ಆಟೋ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ.
ಜಗಳೂರು ತಾಲೂಕಿನ ಕೆಳಗೋಟೆ ನಿವಾಸಿಗಳಾದ ಹಾಲಪ್ಪ, ರುದ್ರಮ್ಮ ಹಾಗೂ ಸಣ್ಣಬಸವರಾಜಪ್ಪ ಮೃತ ದುರ್ದೈವಿಗಳು. 10 ಜನರಿದ್ದ ಆಟೋಕ್ಕೆ ಚಿತ್ರದುರ್ಗದ ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಮೂವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.