ಇದು ನೇತಾಜಿ ಕ್ಯಾಂಪ್ ಯೋಧನ ಸ್ಥಿತಿ

334

ನಟ ಅನಿರುದ್ಧ ಮಾಡಿರುವ ಒಂದೊಳ್ಳೆ ಕೆಲಸ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. 94 ವರ್ಷದ ನಿವೃತ್ತ ಯೋಧನ ಕಷ್ಟಕ್ಕೆ ನಟ ಅನಿರುದ್ಧ ಹೃದಯ ಸ್ಪಂದಿಸಿದೆ. ಸಿ.ಎಂ ಪಾಂಡಿಯಾರಾಜ ಅವರ ಕಷ್ಟದ ಬಗ್ಗೆ ಅನಿರುದ್ಧ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ತಮಿಳುನಾಡಿನ ರಾಮನಾಥಪುರಂನಲ್ಲಿರುವ ಸಿ.ಎಂ ಪಾಂಡಿಯಾರಾಜ, ಸ್ವಂತ ಮನೆಯಿಲ್ಲದೆ ಈಗ್ಲೂ ಬಾಡಿಗೆ ಮನೆಯಲ್ಲಿಯೇ ವಾಸವಾಗಿದ್ದಾರೆ. ಈ ಬಗ್ಗೆ ಗೊತ್ತಾ ಅನಿರುದ್ಧ ಪಿಎಂಗೆ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಇದಕ್ಕೆ ಏನು ಪ್ರತಿಕ್ರಿಯೆ ಬರುತ್ತೆ ನೋಡೋಣವೆಂದು ಹೇಳಿದ್ದಾರೆ. ಅಲ್ದೇ, ತಾವು ಬರೆದ ಪತ್ರವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ನೇತಾಜಿ ಕ್ಯಾಂಪ್ ನಲ್ಲಿದ್ದ ಸೈನಿಕ:

ಸಿ.ಎಂ ಪಾಂಡಿಯಾರಾಜ ಅವರು 1943ರಲ್ಲಿ ನೇತಾಜಿ ಸುಭಾಷ ಚಂದ್ರ ಬೋಸ್ ಅವರು ಸ್ಥಾಪಿಸಿದ್ದ ಆಝಾದಿ ಹಿಂದ್ ಪೌಜ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂಥಾ ಸೈನಿಕ ಇಂದಿಗೂ ಸ್ವಂತ ಸೂರಿಲ್ಲದೆ ಒದ್ದಾಡ್ತಿದ್ದಾರೆ. ಇವರ ಕಷ್ಟಕ್ಕೆ ಕಿರುತರೆಯಲ್ಲಿ ಆರ್ಯವರ್ಧನ ಪಾತ್ರದ ಮೂಲಕ ಖ್ಯಾತಿ ಗಳಿಸಿರುವ ನಟ ಅನಿರುದ್ಧ ಪಿಎಂಗೆ ಲೆಟರ್ ಬರೆದಿದ್ದಾರೆ. ಇವರ ಈ ಕಾರ್ಯವನ್ನ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!