ನೂರಾರು ಕನ್ನಡ ಚಿತ್ರಗಳಲ್ಲಿ ಸಹನಟನಾಗಿ, ಖಳನಟನಾಗಿ ಕಾಣಿಸಿಕೊಂಡಿರುವ ಕಿಲ್ಲರ್ ವೆಂಕಟೇಶಗೆ ಚಾಲೆಂಜಿಂಗ್ ಸ್ಟಾರ್ ದರ್ಶನ ನೆರವು ನೀಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಕಿಲ್ಲರ್ ವೆಂಕಟೇಶ ಬಗ್ಗೆ ನಟ ಜಗ್ಗೇಶ ಟ್ವೀಟ್ ಮೂಲಕ ತಿಳಿಸಿ, ಬೇರೆ ಬೇರೆ ಮೂಲಗಳಿಂದ ನೆರವು ಕೊಡಿಸಿದ್ರು. ಅದೇ ರೀತಿ ದರ್ಶನಗೆ ಫೋನ್ ಮಾಡಿ ತಿಳಿಸಿದ್ರು. ಇದಕ್ಕೆ ದಚ್ಚು ಸ್ಪಂದಿಸಿದ್ದಾರೆ.
ನಟ ದರ್ಶನ, ಕಿಲ್ಲರ್ ವೆಂಕಟೇಶಗೆ 1 ಲಕ್ಷ ರೂಪಾಯಿ ಹಣ ಕಳಿಸುವ ಮೂಲಕ ಚಿಕಿತ್ಸೆಗೆ ನೆರವು ನೀಡಿದ್ದಾರೆ. ಇದನ್ನ ಟ್ವೀಟರ್ ನಲ್ಲಿ ಹಂಚಿಕೊಂಡಿರುವ ನಟ ಜಗ್ಗೇಶ, ದರ್ಶನಗೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ. ನವರಸ ನಾಯಕ ಜಗ್ಗೇಶ ಹಾಗೂ ಕಿಲ್ಲರ್ ವೆಂಕಟೇಶ ಆರಂಭದ ದಿನಗಳಲ್ಲಿ ಸಹನಟರಾಗಿ ಒಟ್ಟಿಗೆ ಕಾಣಿಸಿಕೊಂಡವರು. ಅವರಿಗೆ ಜಗ್ಗೇಶ ನೆರವಾಗ್ತಿರುವುದು ನಿಜಕ್ಕೂ ಒಳ್ಳೆಯ ಕೆಲಸ.