ಸಿಂದಗಿ: ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಮೌಢ್ಯತೆ ಮೆರೆಯಲಾಗಿದೆ.
24ವರ್ಷದ ಪಪ್ಪು ಮುಲ್ಲಾ ಅನ್ನೋ ಅಂಗವಿಕಲತೆಯನ್ನ ಹೊಂದಿರುವ ಯುವಕನನ್ನ ಮಣ್ಣಿನಲ್ಲಿ ಹೂತಿಡಲಾಗಿದೆ. ಕುತ್ತಿಗೆವರೆಗೂ ಮಣ್ಣಿನಲ್ಲಿ ಹೂತಿಡಲಾಗಿದೆ. ಗ್ರಹಣದ ಸಮಯದಲ್ಲಿ ಹೀಗೆ ಮಾಡುವುದ್ರಿಂದ ಕಾಲು ಮರಳಿ ಬರುತ್ತೆ ಅನ್ನೋ ನಂಬಿಕೆ ಕುಟುಂಬಸ್ಥರದ್ದು. ಆದ್ರೆ ಇದನ್ನ ನಂಬಿಕೆ ಅನ್ನಬೇಕೋ ಹುಚ್ಚುತನ ಅನ್ನಬೇಕೋ ಗೊತ್ತಾಗುವುದಿಲ್ಲ.