ಎಪಿಎಂಸಿ ಕಾಯ್ದೆ ರೈತರಿಗೆ ಮಾರಕವಲ್ಲ: ಡಿಸಿಎಂ ಸವದಿ

284

ಪ್ರಜಾಸ್ತ್ರ ಸುದ್ದಿ

ಅಥಣಿ: ಪಟ್ಟಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತಪರ ಹಾಗೂ ಜನಪರವಾಗಿವೆ. ಈ ವಿಚಾರವಾಗಿ ಗೊಂದಲಬೇಡ. ವಿರೋಧ ಪಕ್ಷಗಳು ವಿನಾಕಾರಣವಾಗಿ ರೈತರ ದಿಕ್ಕನ್ನು ತಪ್ಪಿಸುತ್ತಿವೆ ಎಂದರು.

ಎಪಿಎಂಸಿ ಕಾಯ್ದೆ ಯಾರಿಗೂ ಮಾರಕವಲ್ಲ. ಇದ್ರಿಂದ ರೈತರಿಗೆ ಸ್ವಾಯತ್ತತೆ ಸಿಗುತ್ತದೆ. ನಮ್ಮ ಸರಕಾರವು ರೈತರನ್ನು ಬಲಿಕೊಡುವ ಕೆಲಸವನ್ನು ಯಾವತ್ತು ಮಾಡುವುದಿಲ್ಲ. ನಮ್ಮ ಸರಕಾರ ರೈತ ಪರ ಸರ್ಕಾರವಾಗಿದೆ ಎಂದು ಹೇಳಿದರು.

ಇನ್ನು ಪ್ರವಾಹ ಪರಿಹಾರ ಕುರಿತು ಪ್ರತಿಕ್ರಿಯಿಸಿದ ಅವರು ರಾಜ್ಯ ಸರಕಾರ ಮೋದಲು ಘೋಷಣೆ ಮಾಡಿದ್ದ ರೀತಿಯಲ್ಲಿ ಪರಿಹಾರ ನೀಡಲು ಬದ್ದವಾಗಿದೆ. ಕೇಂದ್ರದ ಪರಿಹಾರದ ಜೊತೆಗೆ ರಾಜ್ಯ ಸರ್ಕಾರ ಮೊದಲು ಘೋಷಿಸಿದ್ದ ಪರಿಹಾರ ಕೊಡಲಾಗುತ್ತೆ. ಈಗಾಗಲೇ ಶೇಕಡಾ 60 ಪರಿಹಾರ ನೀಡಲಾಗಿದೆ. ಇನ್ನುಳಿದ ಸಂತ್ರಸ್ತರಿಗೆ ಕೂಡಲೆ ಕೊಡಲಾಗುವುದು ಎಂದರು.




Leave a Reply

Your email address will not be published. Required fields are marked *

error: Content is protected !!