ಅಂದು ಮುಂಬೈ ಪಾಕ್ ಆಕ್ರಮಿತ ಕಾಶ್ಮೀರ ಅಂದ್ಳು.. ಇಂದು ಇವರನ್ನ ಉಗ್ರರಿಗೆ ಹೋಲಿಸಿದ್ಳು..

368

ಪ್ರಜಾಸ್ತ್ರ ಸುದ್ದಿ

ನಟಿ ಕಂಗನಾ ರಣೌತ್ ಒಂದಲ್ಲ ಒಂದು ವಿವಾದವನ್ನ ಮೈಮೇಲೆ ಎಳೆದುಕೊಳ್ತಿದ್ದಾಳೆ. ಬಿಜೆಪಿ ಏಜೆಂಟ್ ರೀತಿಯಲ್ಲಿ ಮಾತ್ನಾಡ್ತಿರುವ ನಟಿ ಕಂಗನಾ ಇದೀಗ ರೈತ ಪರ ಹೋರಾಟಗಾರರನ್ನ ಉಗ್ರರಿಗೆ ಹೋಲಿಸಿದ್ದಾಳೆ. ಈ ಮೂಲಕ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾಳೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ಸಂಬಂಧ ದೇಶದಲ್ಲಿ ಹೋರಾಟಗಳು ನಡೆಯುತ್ತಿವೆ. ವಿಪಕ್ಷಗಳು ಇದನ್ನ ವಿರೋಧಿಸಿವೆ. ಅಷ್ಟೇ ಏಕೆ ಬಿಜೆಪಿಯ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ ಸಹ ವಿರೋಧಿಸಿ ಏಕೈಕ ಸಚಿವೆ ಹರ್ ಸಿಮ್ರಿತ್ ಕೌರ್ ಬಾದಲ್ ರನ್ನ ವಾಪಸ್ ಕರೆಸಿಕೊಂಡಿದೆ.

ಇತ್ತ ಪ್ರಧಾನಿ ಮೋದಿ, ಈ ಕಾಯ್ದೆ ತುದ್ದುಪಡಿಯಿಂದ ರೈತರಿಗೆ ಅನ್ಯಾಯವಾಗುವುದಿಲ್ಲವೆಂದು ಇಂಗ್ಲಿಷ್, ಹಿಂದಿ ಜೊತೆಗೆ ಪಂಜಾಬಿ ಭಾಷೆಯಲ್ಲಿಯೂ ಟ್ವೀಟ್ ಮಾಡಿ ಮನವಿ ಮಾಡ್ತಿದ್ದಾರೆ. ಇದನ್ನ ರೀಟ್ವೀಟ್ ಮಾಡಿದ ಕಂಗನಾ, ಪ್ರಧಾನಮಂತ್ರಿಜಿ, ನಿದ್ದೆ ಮಾಡ್ತಿರುವವರನ್ನ ಎಬ್ಬಿಸಬಹುದು. ಏಳ್ತಾರೆ. ತಪ್ಪು ತಿಳಿದವರಿಗೆ ಅರ್ಥೈಸಿಬಹುದು. ಮಲಗಿದಂತೆ ನಟಿಸುವವರಿಗೆ ಹೇಗೆ ತಿಳಿಸುವುದು? ಸಿಎಎಯಿಂದ ಯಾರ ಪೌರತ್ವ ಹೋಗದಿದ್ರೂ ರಕ್ತದ ಹೊಳೆ ಹರಿಸಿದ ಅದೆ ಉಗ್ರರು ಇವರು ಎಂದು ಬರೆಯುವ ಮೂಲಕ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾಳೆ.

ಬಾಲಿವುಡ್ ನಲ್ಲಿ ಡ್ರಗ್ಸ್, ನೆಪೋಟಿಸಂ ವಿಚಾರದಲ್ಲಿ ಸುದ್ದಿಯಾದ ನಟಿ, ದೇಶದೊಳಗೆ ಇರುವ ಮುಂಬೈ ನಗರವನ್ನ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ಳು. ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾಳೆ. ಪ್ರಧಾನಿ ಮೋದಿಯನ್ನ ಮೆಚ್ಚಿಸಲು ಕಂಗನಾ ಇಷ್ಟೊಂದು ಸರ್ಕಸ್ ಯಾಕೆ ಮಾಡ್ತಿದ್ದಾಳೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಬಹುದು.




Leave a Reply

Your email address will not be published. Required fields are marked *

error: Content is protected !!