ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಚುನಾವಣೆ ಆಯೋಗ ಸಲ್ಲಿಸಿರುವ ಅರ್ಜಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಬಿಬಿಎಂಪಿ ಚುನಾವಣೆಯ ತೀರ್ಪನ್ನ ಕಾಯ್ದಿರಿಸಿದೆ. ಇದರೊಂದಿಗೆ ಬಿಬಿಎಂಪಿ ಎಲೆಕ್ಷನ್ ಹಣೆಬರಹ ಕೋರ್ಟ್ ಅಂಗಳದಲ್ಲಿದೆ.
ಚುನಾವಣೆಗೆ ರಾಜ್ಯ ಚುನಾವಣೆ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಆದ್ರೆ, ಸರ್ಕಾರ ಸಹಕರಿಸ್ತಿಲ್ಲವೆಂದು ಅರ್ಜಿ ಸಲ್ಲಿಕೆಯಾಗಿದೆ. ಇನ್ನೊಂದೆಡೆ 198 ವಾರ್ಡ್ ಗಳನ್ನ 243ಕ್ಕೆ ಏರಿಕೆ ಮಾಡಿ ಚುನಾವಣೆ ಮುಂದೂಡುವ ಪ್ಲಾನ್ ಮಾಡಲಾಗಿದೆ ಎಂದು ಕಾಂಗ್ರೆಸ್ ಸದಸ್ಯರಾಗಿದ್ದ ವಾಜಿದ್ ಹಾಗೂ ಎಂ.ಶಿವರಾಜ ಎಂಬುವರು ಸಹ ಅರ್ಜಿ ಸಲ್ಲಿಸಿದ್ದಾರೆ. ಈ ಎರಡು ಅರ್ಜಿಗಳ ವಾದ-ವಿವಾದ ಆಲಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪನ್ನ ಕಾಯ್ದಿರಿಸಿದೆ.