ಪ್ರಜಾಸ್ತ್ರ ಸುದ್ದಿ
ಬೆಂಗಳೂರು/ವಿಜಯಪುರ: ವಾಟಾಳ್ ನಾಗರಾಜ ನೇತೃತ್ವದಲ್ಲಿ ನಗರದಲ್ಲಿ ಬುಧುವಾರ ಕನ್ನಡ ಪರ ಸಂಘಟನೆಗಳ ಒಕ್ಕೂಟ, ಡಿಸೆಂಬರ್ 5ರ ಬಂದ್ ಸಂಬಂಧ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಮಾತ್ನಾಡಿ ವಾಟಾಳ್ ನಾಗರಾಜ, ಸಾರಾ ಗೋವಿಂದ, ಮುಖ್ಯಮಂತ್ರಿ ಚಂದ್ರು, ಬಿ.ಟಿ ಲಲಿತಾನಾಯಕ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ರು.
ಬಳ್ಳಾರಿಯಿಂದ ಚಾಮರಾಜನಗರದ ತನಕ ಹೋರಾಟ ಮಾಡಿಕೊಂಡು ಬರಲಾಗುತ್ತೆ. ನಮ್ಮ ಬಂಧನವಾದ್ರೂ ನಾವು ಅಂಜುವುದಿಲ್ಲ ಹಾಗೂ ಜಾಮೀನಿಗಾಗಿ ಅರ್ಜಿ ಸಲ್ಲಿಸುವುದಿಲ್ಲವೆಂದು ಹೇಳಿದ್ರು. ಇನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕಡಿ ಕಾರಿದ ಮುಖಂಡರು, ಡಿಸೆಂಬರ್ 1ರಂದು ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡುತ್ತೇವೆ. ಅದೇನ್ ಮಾಡ್ತಾರೆ ಮಾಡ್ಲಿ ನೋಡೋಣ ಅನ್ನೋ ರೀತಿಯಲ್ಲಿ ವಾಗ್ದಾಳಿ ನಡೆಸಿದ್ರು.
ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನ ರೋಲ್ ಕಾಲ್ ಎಂದು ಕಿಡಿ ಕಾರಿದ್ದ ಯತ್ನಾಳ, ವಿಜಯಪುರದಲ್ಲಿ ಪ್ರತಿಭಟನೆ ಮಾಡಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ರು. ಇದನ್ನ ಸ್ವೀಕರಿಸಿರುವ ಕನ್ನಡಪರ ಸಂಘಟನೆಗಳು, ಡಿಸೆಂಬರ್ 1ರಂದು ವಿಜಯಪುರದಲ್ಲಿ ರಾಜ್ಯದ ಮೂಲೆ ಮೂಲೆಯಿಂದ 1 ಸಾವಿರಕ್ಕೂ ಅಧಿಕ ಕನ್ನಡಪರ ಸಂಘಟನೆಗಳು ಭಾಗವಹಿಸುವ ಮೂಲಕ ಒಂದು ಐತಿಹಾಸಿಕ ಹೋರಾಟ ಮಾಡಲಾಗುತ್ತೆ ಎಂದು ಹೇಳಿದ್ರು.