ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಮೈಸೂರು: ಸ್ವಜನ್ಯ ಕಲಾ ವೇದಿಕೆ ಹಾಗೂ ಅಮೋಘ ಪ್ರಕಾಶನ ಸಹಯೋಗದಲ್ಲಿ ಡಾ.ಮಣಿಶ್ರೀ ಅವರ ‘ಅತಿಥಿ ದೇವೋಭವ’ ಕಾದಂಬರಿ ಏಪ್ರಿಲ್ 13, ಶನಿವಾರ ಸಂಜೆ ಲೋಕಾರ್ಪಣೆಗೊಳ್ಳುತ್ತಿದೆ.
ನಗರದ ಪ್ರೊ.ಎ.ಸಿ ದೇವೇಗೌಡ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಎಸ್.ಬಿ ಅಪ್ಪಾಜಿಗೌಡ ಉದ್ಘಾಟಿಸಲಿದ್ದಾರೆ. ಯುವ ಕವಿ ಎಸ್.ಶಿಶಿರಂಜನ್ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಹಿರಿಯ ಸಾಹಿತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿದ್ದರಾಮ್ ಹೊನ್ಕಲ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಶಿಕ್ಷಕಿ ವನಜಾಕ್ಷಿ.ಎಸ್ ಕೃತಿ ಕುರಿತು ಮಾತನಾಡಲಿದ್ದಾರೆ. ಡಾ. ಮನೋಹರ ಎಂ.ಸಿ, ಡಾ.ಸೋಮಶೇಖರ್ ಎಚ್.ಶಿಮೊಗ್ಗಿ, ಡಾ.ಎಂ ರಂಗಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.