ನಾಳೆಯಿಂದ ಹಳ್ಳಿಗಳಿಗೆ ಬಸ್ ಸಂಚಾರ

326

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಈಗಾಗ್ಲೇ ರಾಜ್ಯದಲ್ಲಿ ಬಸ್ ಸಂಚಾರ ಶುರುವಾಗಿದೆ. ಜಿಲ್ಲೆಗಳ ನಡುವೆ, ತಾಲೂಕುಗಳ ನಡುವೆ ಬಸ್ ಸೇವೆ ನೀಡಲಾಗಿದೆ. ಆದ್ರೆ, ಹಳ್ಳಿಗಳಿಗೆ ಇರ್ಲಿಲ್ಲ. ಇನ್ನು ನಾಳೆಯಿಂದ ಹಳ್ಳಿಗಳಿಗೆ ಬಸ್ ಸಂಚಾರ ಶುರುವಾಗಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ತಾಲೂಕು, ಹೋಬಳಿಗಳಿಂದ ಅಗತ್ಯಕ್ಕೆ ಅನುಗುಣವಾಗಿ ಹಳ್ಳಿಗೆ ಬಸ್ ಸಂಚಾರ ಶುರು ಮಾಡಲಾಗುವುದು. ಲಾಕ್ ಡೌನ್ ನಿಂದಾಗಿ 2,200 ಕೋಟಿ ರೂಪಾಯಿ ನಷ್ಟವಾಗಿದೆ. ಇದು 3 ಸಾವಿರ ಕೋಟಿ ಆಗುವ ಸಾಧ್ಯತೆಯಿದೆ. ಹೀಗಾಗಿ ಆಡಳಿತದಲ್ಲಿ ಒಂದಿಷ್ಟು ಸುಧಾರಣೆ ತೆಗೆದುಕೊಂಡು ಬಂದು, ನಷ್ಟ ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ನೌಕರರಿಗೆ 2 ತಿಂಗಳ ಸಂಬಳ ನೀಡಲಾಗಿದೆ. ಇದಕ್ಕಾಗಿ 650 ಕೋಟಿ ರೂಪಾಯಿ ನೀಡಲಾಗಿದೆ. ಇನ್ನು ಯಾರನ್ನೂ ಕೆಲಸದಿಂದ ತೆಗೆದಯುವುದಿಲ್ಲ. ಕಡ್ಡಾಯ ರಜೆ ಇಲ್ಲ. ಒಂದು ಕಡ್ಡಾಯ ರಜೆ ನೀಡಿದ್ರೆ, ಅಧಿಕಾರಿಗಳ ಮೇಲೆ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!