ಪ್ರಜಾಸ್ತ್ರ ಸುದ್ದಿ
ಹಾವೇರಿ: ಏನು ಅರಿಯದ ಮಕ್ಕಳಿಬ್ಬರು ಕಾರು ಹರಿದ ಪರಿಣಾಮ ಮೃತಪಟ್ಟ ಘಟನೆ ಹಿರೇಕೆರೂರು ತಾಲೂಕಿನ ಸುತ್ತುಕೋಟಿ ಗ್ರಾಮದ ಹತ್ತಿರ ನಡೆದಿದೆ. 8 ವರ್ಷದ ಶಾಲಿನಿ ಹಾಗೂ ಯಶೋಧಾ ಮೃತಪಟ್ಟ ಪುಟ್ಟ ಮಕ್ಕಳಾಗಿದ್ದಾರೆ. ಅಲ್ದೇ, ಕಾರಿನಲ್ಲಿದ್ದ ಶಿಕ್ಷಕ ಜಯಪ್ರಕಾಶ್(48) ಸಹ ಮೃತಪಟ್ಟಿದ್ದಾರೆ.
ಕಾರು ಚಲಾಯಿಸಿಕೊಂಡು ಬರುತ್ತಿದ್ದ ಶಿಕ್ಷಕ ಸುತ್ತಕೋಟೆ ಬಳಿ ನಿಯಂತ್ರಣಕ್ಕೆ ಸಿಗದೆ ಜಮೀನಿಗೆ ನುಗ್ಗಿದೆ. ಅಲ್ಲೇ ಆಟವಾಡುತ್ತಿದ್ದ ಮಕ್ಕಳಿಬ್ಬರಿಗೆ ಗುದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಕ್ಕಳನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಮಕ್ಕಳು ಬದುಕುಳಿದಿಲ್ಲ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.