ಕಾರು ಅಪಘಾತದಲ್ಲಿ ರಿಷಬ್ ಪಂತ್ ಗೆ ಗಂಭೀರ ಗಾಯ

174

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಇಂಡಿಯನ್ ಕ್ರಿಕೆಟ್ ಟೀಂ ವಿಕೆಟ್ ಕೀಪರ್, ಬ್ಯಾಟ್ಸಮನ್ ರಿಷಬ್ ಪಂತಗೆ ಕಾರು ಅಪಘಾತದಲ್ಲಿ ಗಂಭೀರ ಗಾಯಗಳಾಗಿವೆ. ದೆಹಲಿಯಿಂದ ಉತ್ತರಾಖಂಡಕ್ಕೆ ವಾಪಸ್ ಆಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಮರ್ಸೆಂಡಿಸ್ ಕಾರು ಹೊತ್ತಿಕೊಂಡು ಉರಿದಿದೆ. ದೆಹಲಿ-ಡಹ್ರಾಡೋನ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಉತ್ತರಕಾಂಡ್ ಡಿಜಿಪಿ ಅಶೋಕ್ ಕುಮಾರ್ ಅವರ ಹೇಳಿಕೆ ಪ್ರಕಾರ, ಕಾರಿನಲ್ಲಿ ಪಂತ್ ಒಬ್ಬರೆ ಇದ್ದರು. ವಿಂಡ್ ಸ್ಕ್ರೀನ್ ಒಡೆದು ಕಾರಿನಿಂದ ಹೊರ ಬಂದಿದ್ದಾರೆ.

ಘಟನೆಯಲ್ಲಿ ತೆಲೆ, ಮೊಣಕಾಲು, ಮೊಣಕೈ ಗಾಯವಾಗಿದೆ. ಕಾಲಿನ ಮೂಳೆ ಮುರಿತದ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!