ಹಿಂದೂ ದೇವರ ಅವಹೇಳನ ವಿಚಾರ: ಶಾಸಕ ನಿರಾಣಿ ಸ್ಪಷ್ಟನೆ

337

ಪ್ರಜಾಸ್ತ್ರ ಸುದ್ದಿ

ಬೀಳಗಿ: ಮಾಜಿ ಸಚಿವ, ಶಾಸಕ ಮುರುಗೇಶ ನಿರಾಣಿ ಅವರ ವಾಟ್ಸಪ್ ನಂಬರ್ ನಿಂದ, ಹಿಂದೂ ದೇವರ ಅವಹೇಳನಕಾರಿ ಮೆಸೇಜ್ ಫಾರ್ವಡ್ ಆಗಿದೆ. ಹೀಗಾಗಿ ಸಹಜವಾಗಿ ಬಿಜೆಪಿ ಹಾಗೂ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದ್ರೆ, ಇದಕ್ಕೆ ಅವರು ಸ್ಪಷ್ಟೀಕರಣ ನೀಡಿದ್ದಾರೆ.

 ಈ ಕುರಿತು ಬಾಗಲಕೋಟೆಯ ಮುಧೋಳದಲ್ಲಿ ಬಿಜೆಪಿ ಶಾಸಕ ಮುರುಗೇಶ ನಿರಾಣಿ ಮಾತನಾಡಿದ್ದು, ನನಗೆ ಎಲ್ಲ ಧರ್ಮದ ಮೇಲೆ ಸಾಕಷ್ಟು ನಂಬಿಕೆ ಇದೆ. ಎಲ್ಲ ಧರ್ಮಗಳು ಸಮಾನ ಭಾವದಿಂದ ಗೌರವಿಸುತ್ತೇನೆ.‌ ಅಲ್ಲದೇ, ನನಗೆ ಧರ್ಮದ ಮೇಲೆ ಅಭಿಮಾನವಿದೆ ಎಂದರು. ಇನ್ನು ನಾಡಿನ ಜನತೆ ನನ್ನನ್ನು ತಪ್ಪು ಭಾವಿಸಬೇಡಿ.‌ ನನ್ನ ಆಪ್ತಕಾರ್ಯದರ್ಶಿಯಿಂದ ಇಂತಹ ಅಚಾತುರ್ಯ ನಡೆದಿದೆ. ಅದಕ್ಕಾಗಿ ನಾಡಿನ ಜನತೆಗೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಮಾಜಿ ಸಚಿವ, ಶಾಸಕ ಮುರುಗೇಶ ನಿರಾಣಿ ಅವರ ಸ್ಪಷ್ಟೀಕರಣದ ವಿಡಿಯೋ..




Leave a Reply

Your email address will not be published. Required fields are marked *

error: Content is protected !!