ಮಹದಾಯಿ ವಿಚಾರ ತಜ್ಞರೊಂದಿಗೆ ಚರ್ಚಿಸಲಿ: ಜೋಶಿ

338

ಹಬ್ಬಳ್ಳಿ: ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಪ್ರಹ್ಲಾದ್ ಜೋಶಿ ಆಗಮಿಸಿದ್ರು. ಸಂಸದೀಯ ಖಾತೆ, ಕಲ್ಲಿದ್ದಲು ಮತ್ತು ಗಣಗಾರಿಕೆ ಖಾತೆ ಸಚಿವರನ್ನ ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರಾಣಿ ಚೆನ್ನಮ್ಮ ಸರ್ಕಲ್ ವರೆಗೂ ಬೈಕ್ ರ್ಯಾಲಿ ಮೂಲಕ ಮೆರವಣಿಗೆ ನಡೆಸಲಾಯ್ತು.

ಈ ವೇಳೆ ಮಾತ್ನಾಡಿದ ನೂತನ ಕೇಂದ್ರ ಸಚಿವರು, ಧಾರವಾಡ ಲೋಕಸಭಾ ಕ್ಷೇತ್ರದ ಜನರಿಗೆ ಆಭಾರಿಯಾಗಿದ್ದೇನೆ. ನಿನಗೆ ನೀಡಿದ ಜವಾಬ್ದಾರಿಯನ್ನ ನಿರ್ವಹಿಸುತ್ತೇನೆ. ಹುಬ್ಬಳಿ-ಧಾರವಾಡ ಅವಳಿ ನಗರಕ್ಕೆ ಏನೇನು ಬೇಕು ಅನ್ನೋದು ರಾಜ್ಯ ಸರ್ಕಾರ ಹೇಳಬೇಕು. ರಾಜ್ಯ ಸರ್ಕಾರ ಸಲ್ಲಿಸುವ ಪ್ರಸ್ತಾವನೆಯನ್ನ ಕೇಂದ್ರದಿಂದ ತರುವ ಕೆಲಸ ಮಾಡುತ್ತೇನೆ ಅಂತಾ ಹೇಳಿದ್ರು.

ಮಹದಾಯಿ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಲಿ. ನೋಟಿಫಿಕೇಷನ್ ಪೆಡ್ಡಿಂಗ್ ಇದೆ. ಹೀಗಾಗಿ ಎಲ್ಲ ತಜ್ಞರ ಜೊತೆ ಚರ್ಚಿಸಲಿ ಎಲ್ಲ ಸೇರಿಕೊಂಡು ಮಹದಾಯಿ ಸಮಸ್ಯೆ ಬಗೆಹರಿಸೋಣ. ಕೋಯ್ನಾ ನದಿ ಸಮಸ್ಯೆ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಜೊತೆ ಚರ್ಚೆ ಮಾಡಿ ಬಗೆಹರಿಸುತ್ತೇನೆ. ಈ ಬಗ್ಗೆ ರಾಜ್ಯ ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ ಅಂತಾ ಹೇಳಿದ್ರು.


TAG


Leave a Reply

Your email address will not be published. Required fields are marked *

error: Content is protected !!