ಪ್ರಜಾಸ್ತ್ರ ಸುದ್ದಿ
ನವದೆಹಲಿ: ಹಿಂದೂ ಧಾರ್ಮಿಕ ಕೇಂದ್ರಗಳಾಗಿರುವ ಚಾರ್ ಧಾಮ್ ಯಾತ್ರೆಗೆ ಅವಕಾಶ ನೀಡಲಾಗಿದೆ. ಜುಲೈ 1ರಿಂದ ಯಾತ್ರೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕೇದಾರನಾಥ, ಬದ್ರಿನಾಥ, ಗಂಗೋತ್ರಿ, ಯಮುನೋತ್ರಿ ದರ್ಶನ ಪಡೆಯಬಹುದಾಗಿದೆ.
ಈ ನಾಲ್ಕು ಕ್ಷೇತ್ರಗಳು ಉತ್ತರಾಖಂಡದಲ್ಲಿದ್ದು, ಪ್ರತಿ ವರ್ಷ ದೇಶದ ಎಲ್ಲ ಭಾಗಗಳಿಂದ ಹಿಂದೂಗಳು ಇಲ್ಲಿಗೆ ಭೇಟಿ ನೀಡ್ತಾರೆ. ಈ ವರ್ಷ ಕರೋನಾದಿಂದಾಗಿ ನಿರ್ಬಂಧ ಹೇರಲಾಗಿತ್ತು. ಈಗ ಅವಕಾಶ ನೀಡಿದ್ದು, ಶುರುವಿನಲ್ಲಿ ಉತ್ತರಾಖಂಡ ರಾಜ್ಯದವರು ಮಾತ್ರ ದರ್ಶನ ಪಡೆಯಬಹುದು.
ಹೊರ ರಾಜ್ಯಗಳಿಂದ ಬರುವವರಿಗೆ ಸಧ್ಯಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ಹೊರ ರಾಜ್ಯದವರಿಗೆ ಅವಕಾಶ ನೀಡುವವರೆಗೂ ಚಾರ್ ಧಾಮ್ ಯಾತ್ರೆ ಕೈಗೊಳ್ಳಲು ಸಾಧ್ಯವಿಲ್ಲ.