ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹಿರಿಯ ಲೇಖಕಿ, ಖ್ಯಾತ ಕಾದಂಬರಿಕಾರ್ತಿ ಗೀತಾ ನಾಗಭೂಷಣ ವಿಧಿವಶರಾಗಿದ್ದಾರೆ. 79 ವರ್ಷದ ಹಿರಿಯ ಲೇಖಕಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
25ಕ್ಕೂ ಹೆಚ್ಚು ಕಾದಂಬರಿಗಳನ್ನ ಬರೆದಿರುವ ಗೀತಾ ನಾಗಭೂಷಣ ಅವರು, 2010ರಲ್ಲಿ ಗದುಗಿನಲ್ಲಿ ನಡೆದ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ರು.
ಹಿರಿಯ ಲೇಖಕಿಯ ನಿಧನಕ್ಕೆ ಸಾಹಿತ್ಯಲೋಕದವರು, ಅವರ ಅಭಿಮಾನಿಗಳು, ಸಾಹಿತ್ಯ ಆಸಕ್ತರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.