ಬೆಳಗಾವಿ: ಕಾದಂಬರಿಕಾರ ಚಂದ್ರಕಾಂತ ಕುಸನೂರ ಅವರು ಶನಿವಾರ ರಾತ್ರಿ 10.15ಕ್ಕೆ ಸಾವನ್ನಪ್ಪಿದ್ದಾರೆ. 90 ವರ್ಷದ ಸಾಹಿತಿ ನಿನ್ನೆ ರಾತ್ರಿ ಮೃತಪಟ್ಟಿದ್ದು, ಇಂದು ಬೆಳಗಿನ ಜಾವವೇ ಅಂತ್ಯಕ್ರಿಯೆ ನಡೆಸಲಾಗಿದೆ.
ಇಂದು ಬೆಳಗಿನ ಜಾವ ಸುಮಾರು 2 ಗಂಟೆಗೆ ಶಾಹಪುರ ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶದೊಂದಿಗೆ ಅಂತಿಮ ವಿಧಿವಿಧಾನಗಳನ್ನ ಮುಗಿಸಲಾಗಿದೆ. ಕಿರಿಯ ಮಗ ಗುರುರಾಜ ಅಗ್ನಿಸ್ಪರ್ಶ ಮಾಡಿದ್ರು.
ಕಲಬುರಗಿ ಮೂಲದ ಚಂದ್ರಕಾಂಶತ ಕುಸನೂರ, ದಶಕಗಳಿಂದ ಬೆಳಗಾವಿಯಲ್ಲಿ ವಾಸವಾಗಿದ್ರು. ನಿನ್ನೆ ರಾತ್ರಿ ರಾಣಿ ಚೆನ್ನಮ್ಮ ನಗರದ 2ನೇ ಹಂತದಲ್ಲಿರುವ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಪತ್ನಿ, ನಾಲ್ವರ ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯನ್ನ ಅಗಲಿದ್ದಾರೆ.