ಹಸುಗೂಸನ್ನು ಕಸದ ತೊಟ್ಟಿಯಲ್ಲಿ ಎಸೆದ ನೀಚರು

323

ಪ್ರಜಾಸ್ತ್ರ ಸುದ್ದಿ

ಉಡುಪಿ: ಹಸುಗೂಸನ್ನ ಬಾಳೆಎಲೆಯಲ್ಲಿಟ್ಟು ಕಸದ ತೊಟ್ಟಿಯಲ್ಲಿ ಎಸೆದು ಹೋಗಿರುವ ಘಟನೆ, ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎದುರಿನ ಹೋಟೆಲ್ ಬಳಿ ನಡೆದಿದೆ. ಇಂದು ಬೆಳಗ್ಗೆ ಪೌರಕಾರ್ಮಿಕ ಸಿಬ್ಬಂದಿ ಕಸವನ್ನ ತೆಗೆದುಕೊಳ್ಳಲು ಬಂದಾಗ ಹೆಣ್ಣು ಹಸುಗೂಸು ಕಂಡು ಬಂದಿದೆ.

ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗ್ತಿದೆ. ಈ ಘಟನೆಯಿಂದ ನಗರದ ಜನತೆ ಕರುಳಬಳ್ಳಿಯನ್ನ ಎಸೆದು ಹೋದವರಿಗೆ ಹಿಡಿ ಶಾಪ ಹಾಕ್ತಿದ್ದಾರೆ.

ಚಳಿ, ಹಸಿವು ತಾಳಲಾರದೆ ಮಗು ಅಳುತ್ತಿರುವ ದೃಶ್ಯ ನೋಡುಗರಿಗೆ ಕಣ್ಣೀರು ತರಿಸಿದೆ. ಹೆಣ್ಣು ಅನ್ನೋ ಕಾರಣಕ್ಕೆ ಎಸೆದರೋ, ಅಕ್ರಮದಿಂದ ಜನಿಸಿದ ಮಗು ಅನ್ನೋ ಕಾರಣಕ್ಕೆ ಎಸೆದರೋ ಗೊತ್ತಿಲ್ಲ. ಆದ್ರೆ, ಈ ಕೆಲಸ ನಿಜಕ್ಕೂ ನೋವಿನ ಸಂಗತಿ.




Leave a Reply

Your email address will not be published. Required fields are marked *

error: Content is protected !!