ಬೆಳ್ಳಂಬೆಳಗ್ಗೆ ಚಿರತೆ ದಾಳಿ: ವೃದ್ಧೆ ಸಾವು

509

ರಾಮನಗರ: ಜಗುಲಿಯ ಮೇಲೆ ಮಲಗಿದ್ದ ವೃದ್ಧೆಯ ಮೇಲೆ ಚಿರತೆಯೊಂದು ದಾಳಿ ಮಾಡಿದ ಪರಿಣಾಮ ಸಾವನ್ನಪ್ಪಿದ ಘಟನೆ ನಡೆದಿದೆ. ಮಾಗಡಿ ತಾಲೂಕಿನ ಮೋಟಗಾನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊತ್ತಗಾನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಚಿರತೆ ದಾಳಿಗೆ 68 ವರ್ಷದ ಗಂಗಮ್ಮ ಅನ್ನೋ ವೃದ್ಧ ಬಲಿಯಾಗಿದ್ದಾರೆ. ಚಿರತೆ ದಾಳಿ ಭೀಕರತೆ ಎಷ್ಟೊಂದಿತ್ತು ಅನ್ನೋದಕ್ಕೆ ವೃದ್ಧೆಯ ರುಂಡ ಮುಂಡ ಬೇರಾಗಿತ್ತು ಎಂದು ಸ್ಥಳೀಯರು ಹೇಳ್ತಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿದ್ದಾರೆ.

ಕಳೆದ ಶುಕ್ರವಾರ ರಾತ್ರಿ ಕದರಯ್ಯನಪಾಳ್ಯದಲ್ಲಿ 3 ವರ್ಷದ ಮಗುವನ್ನ ತಿಂದು ಹಾಕಿದ ಘಟನೆ ಇನ್ನೂ ಮಾಸಿಲ್ಲ. ಮಗು ತಿಂದ ಚಿರತೆಯ ಬೋನಿಗೆ ಬಿದ್ದಿತ್ತು. ಇದೀಗ ಮತ್ತೊಂದು ಚಿರತೆ ಕಾಣಿಸಿಕೊಂಡು ಅನಾಹುತ ಸೃಷ್ಟಿಸಿದೆ.




Leave a Reply

Your email address will not be published. Required fields are marked *

error: Content is protected !!