ಪ್ರಜಾಸ್ತ್ರ ಸುದ್ದಿ
ಮಂಗಳೂರು: ಇತ್ತೀಚೆಗೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಮಿಷನ್ ಮಾಸ್ಟರ್ ಎಂದು ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದರು. ಬಿಜೆಪಿ ಶಾಸಕ ಹರೀಶ್ ಪೂಂಜಾ ಸಹ ಪೋಸ್ಟ್ ಹಾಕಿ ಬರೆದಿದ್ದರು. ಇದರ ಬಗ್ಗೆ ಸಿಎಂ ಕಿಡಿ ಕಾರಿದ್ದಾರೆ.
ಹರೀಶ್ ಪೂಂಜಾ ನನ್ಮುಂದೆ ಬಚ್ಚಾ. ಶಾಸಕನಾಗಿರುವುದು ನಿನ್ನೆ ಮೊನ್ನೆ. ನಾನು 1983ರಲ್ಲಿ ಶಾಸಕ, 85ರಲ್ಲಿ ಸಚಿವನಾಗಿದ್ದೆ. ಅಲ್ಲಿಂದ ಇಲ್ಲಿಯ ತನಕ ನನ್ನನ್ನು ಯಾರು ಈ ರೀತಿ ಕರೆದಿಲ್ಲ. ರಾಜಕೀಯದಲ್ಲಿ ಹರೀಶ್ ಪೂಂಜಾ ಇನ್ನು ಬಚ್ಚಾ ಅಂತಾ ವಾಗ್ದಾಳಿ ನಡೆಸಿದರು.