ನವದೆಹಲಿ: ಉತ್ತರ ಭಾರತದ ಹಲವು ಕಡೆ ಶೀತಗಾಳಿ ಮುಂದುವರೆದಿದೆ. ಹೀಗಾಗಿ ಜನರು ಮನೆಯಿಂದ ಆಚೆ ಬರಲು ಕಷ್ಟಪಡ್ತಿದ್ದಾರೆ. ರಾಜಸ್ಥಾನದ ಅತ್ಯಂತ ಶೀತಪ್ರದೇಶವಾದ ಶಿಕಾರ್ ನಲ್ಲಿ ಕನಿಷ್ಠ ತಾಪಮಾನ 2.5 ಡಿಗ್ರಿ ಸೆಲ್ಸಿಯಷ್ಟು ದಾಖಲಾಗಿದೆ.
ಇದೇ ರೀತಿ ಪಿಲನಿ, ಗಂಗಾನಗರ, ಚುರು ಹಾಗೂ ಜೈಸಲ್ಮೇರ್ ನಲ್ಲಿ ಕನಿಷ್ಠ ತಾಪಮಾನ 4.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಕಣಿವೆ ನಾಡಿನಲ್ಲಿ ಕಳೆದ ಎರಡು ವಾರಗಳಿಂದ ಶೀತಗಾಳಿ ಮುಂದುವರೆದಿದೆ. ಇದೆ ರೀತಿ ಹರಿಯಾಣ, ಪಂಜಾಬ್ ನಲ್ಲಿಯೂ ಶೀತಗಾಳಿ ಮುಂದುವರೆದಿದೆ. ಇನ್ನು ಎರಡು ದಿನಗಳ ಕಾಲ ವಾತಾವರಣ ಹೀಗೆ ಇರುತ್ತೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ.