ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಜೆಡಿಎಸ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಇರುವುದು ಗುಲಾಮಗಿರಿ ಮಾಡಲು ಮಾತ್ರ ಎಂದು ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಬರೆದಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಕುಟುಂಬದ ಗುಲಾಮಗಿರಿ, ಬಿಜೆಪಿ ರಾಜ್ಯಾಧ್ಯಕ್ಷ ಹೈಕಮಾಂಡ್ ಗುಲಾಮಗಿರಿಗೆ. ಮೈತ್ರಿ ಮಾಡಿಕೊಳ್ಳುವ ಕುರಿತು ನನ್ನೊಂದಿಗೆ ಚರ್ಚೆಯೇ ಮಾಡಿಲ್ಲ ಎಂದಿದ್ದಾರೆ ಸಿ.ಎಂ ಇಬ್ರಾಹಿಂ, ಇತ್ತ ಈ ಮೈತ್ರಿ ನಾಟಕದಲ್ಲಿ ನಳೀನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಅತಿಥಿ ಪಾತ್ರವೂ ಇಲ್ಲ ಎಂದು ಬರೆಯುವ ಮೂಲಕ ಕಾಂಗ್ರೆಸ್ ಕಾಲೆಳೆದಿದೆ.