ಛತ್ತೀಸಗಡ್: ಕಾರ್ಮಿಕನೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯಲ್ಲಿ ಮಹಿಳಾ ಐಪಿಎಸ್ ಅಧಿಕಾರಿಗೆ ಕಾಂಗ್ರೆಸ್ ಶಾಸಕಿ ಬೆದರಿಕೆ ಹಾಕಿರೋದು ವೈರಲ್ ಆಗಿದೆ. ಕಾಂಗ್ರೆಸ್ ಶಾಸಕಿ ಶಕುಂತಲಾ ಸಾಹು ಎಂಬುವರು, ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಎಂಬುವರಿಗೆ ಅವಾಜ್ ಹಾಕಿದ್ದಾರೆ.
ಸಿಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಕಾರ್ಮಿಕನೊಬ್ಬ ಮೃತಪಟ್ಟಿದ್ದ, ಈ ಸಂಬಂಧ ಕುಟುಂಬಸ್ಥರು ಸೇರಿದಂತೆ ಅನೇಕರು ಸಾವಿಗೆ ನ್ಯಾಯ ಬೇಕೆಂದು ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆಕಾರರು ಬಳಿಕ ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಲು ಮುಂದಾಗಿದ್ರು. ಈ ವೇಳೆ ಪ್ರತಿಭಟನಾಕಾರರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.
ಮಾತಿನ ಚಕಮಕಿ ನಡುವೆ ಐಪಿಎಸ್ ಅಧಿಕಾರಿ ಅಂಕಿತಾ ಮಧ್ಯಪ್ರವೇಶಿಸಿ ಮಾತ್ನಾಡಲು ಮುಂದಾದಾಗ ಶಾಸಕಿ ಶಕುಂತಲಾ ಸಾಹು, ಬೆದರಿಕೆ ಹಾಕುವ ದಾಟಿ ಮಾತ್ನಾಡಿದ್ದಾರೆ. ನಾನೇನು ಅನ್ನೋದು ತೋರಿಸುತ್ತೇನೆ ಅಂತಾ ಹೇಳಿದ್ದಾರೆ. ನೀವು ಯಾರಿಗಾದ್ರೂ ಕಂಪ್ಲೇಟ್ ಕೊಡಿ ಐ ಡೇಂಟ್ ಕೇರ್ ಅಂದಿದ್ದು, ಇದು ವೈರಲ್ ಆಗಿದೆ.