ಕಲಬುರಗಿ: ದೇಶದಲ್ಲಿರುವ 100 ಕೋಟಿ ಹಿಂದೂಗಳನ್ನ ಮಣಿಸಲು 15 ಕೋಟಿ ಮುಸ್ಲಿಂರು ಸಾಕು ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಐಎಂಐಎಂ ಮುಖಂಡ ವಾರಿಸ್ ಪಠಾಣ್ ವಿರುದ್ಧ ಕೇಸ್ ದಾಖಲಾಗಿದೆ. ಕಲಬುರಗಿ ಪೊಲೀಸರು ಪಠಾಣ್ ವಿರುದ್ಧ ಐಪಿಸಿ ಸೆಕ್ಷನ್ 117, 150 ಹಾಗೂ 153 ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಫೆಬ್ರವರಿ 16 ರಂದು ಕಲಬುರಗಿಯಲ್ಲಿ ನಡೆದ ಸಿಎಎ ವಿರೋಧಿ ರ್ಯಾಲಿಯಲ್ಲಿ ಮಾತ್ನಾಡಿದ್ದ ವಾರಿಸ್, ನಮಗೂ ಸ್ವಾತಂತ್ರ್ಯ ಬೇಕು. ಆದ್ರೆ, ಇದನ್ನ ಕೇಳಿ ಪಡೆಯಬೇಕಾಗಿಲ್ಲ. ಬಲವಂತದಿಂದ ಪಡೆಯಬೇಕು ಅಂತಾ ಹೇಳಿದ್ದ. ಮುಸ್ಲಿಂರು 15 ಕೋಟಿಗಿಂತ ಕಡಿಮೆಯೇ ಇರಬಹುದು, 100 ಕೋಟಿ ಹಿಂದೂಗಳನ್ನ ಮಣಿಸಲು ಇಷ್ಟು ಸಾಕು ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ್ದ. ಇದರ ವಿರುದ್ಧ ಶಿವಸೇನೆ ಹಾಗೂ ಬಿಜೆಪಿ ಪ್ರತಿಭಟನೆ ನಡೆಸಿದ್ವು.