ಮೈಸೂರಲ್ಲಿ ನಾಲ್ವರು ರೌಡಿ ಶೀಟರ್ ಗಳ ಗಡಿಪಾರಿಗೆ ಆದೇಶ

147

ಪ್ರಜಾಸ್ತ್ರ ಸುದ್ದಿ

ಮೈಸೂರು: ಬೆದರಿಕೆ, ಜಗಳ, ಕೊಲೆ ಹೀಗೆ ಹಲವು ಪ್ರಕರಣಗಳಿಗೆ ಸಂಬಂಧಪಟ್ಟ ನಾಲ್ವರು ರೌಡಿಶೀಟರ್ ಗಳನ್ನು ಗಡಿಪಾರು ಮಾಡುವಂತೆ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶಿಸಿದ್ದಾರೆ.

ಮಂಜುನಾಥ್, ಮಧುಸೂದನ್, ಸತೀಶ್ ಹಾಗೂ ಕುಮಾರ್ ಅನ್ನೋ ರೌಡಿ ಶೀಟರ್ ಗಳನ್ನು ಗಡಿಪಾರು ಮಾಡಲು ಆದೇಶಿಸಲಾಗಿದೆ. ಇಟ್ಟಿಗೆಗೂಡು ಬಡಾವಣೆಯ ಮಂಜುನಾಥ್ ವಿರುದ್ಧ 8,  ವೀರನಗರೆಯ ಮಧುಸೂದನ್ ವಿರುದ್ಧ 4, ಯರಗಳ್ಳಿಯ ಸತೀಶ್ ವಿರುದ್ಧ 7 ಹಾಗೂ ಮಹದೇವಪುರ ರೌಡಿ ಶೀಟರ್ ಕುಮಾರ್ ವಿರುದ್ಧ 7 ಪ್ರಕರಣಗಳಿವೆ.

ಸಮಾಜದಲ್ಲಿ ಶಾಂತಿ ಹಾಳು ಮಾಡುವುದು, ಸ್ವಾಸ್ತ್ಯ ಕಡೆಸುವುದು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಗಡಿಪಾರು ಮಾಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶದಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!