ಪ್ರಜಾಸ್ತ್ರ ಸುದ್ದಿ
ಮೈಸೂರು: ಬರ ಪರಿಹಾರ ನಿರ್ಧರಿಸುವ ಸಮಿತಿಗೆ ಅಮಿತ್ ಶಾ ಅಧ್ಯಕ್ಷರಿದ್ದಾರೆ. ಆದರೆ, ಐದು ತಿಂಗಳಾದರೂ ರಾಜ್ಯಕ್ಕೆ ಬರ ಪರಿಹಾರ ಕೊಟ್ಟಿಲ್ಲ. ಆದರೆ, ಈಗ ಇಲ್ಲಿ ಕೇಳಲು ಬಂದಿದ್ದಾರೆ. ಅವರಿಗೆ ಮತ ಕೇಳುವ ನೈತಿಕತೆ ಇಲ್ಲ. ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದು ತಿಂಗಳಾದರೂ ರಾಜ್ಯಕ್ಕೆ ಬಿಡುಗಾಸು ಪರಿಹಾರ ನೀಡಿಲ್ಲ. ಅವರ ಮನೆಯಿಂದ ಕೊಡುತ್ತಾರಾ? ಅದೇನು ನಮಗೆ ಭಿಕ್ಷೆನಾ ಎಂದು ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿಯವರೇ ಈಗ ಬಿಜೆಪಿಯ ದೊಡ್ಡ ವಕ್ತಾರರಾಗಿದ್ದಾರೆ. ಬರ ಪರಿಹಾರ ಕೊಡದಿರುವುದನ್ನು ಸಮರ್ಥಿಸಕೊಳ್ಳುತ್ತಾರೆ ಎಂದು ಕಿಡಿ ಕಾರಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೇ ಅವರ ಮಗ ಸೋತಿದ್ದ. ಈ ಬಾರಿ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಸೋಲುತ್ತದೆ. ಕಳೆದ ಸಾರಿ ನಾನು ಹಾಸನಕ್ಕೆ ಹೋಗಿದ್ದಕ್ಕೆ ಪ್ರಜ್ವಲ್ ರೇವಣ್ಣ ಸೋತಿದ್ದು, ಈ ಬಾರಿಯೂ ಹೋಗುತ್ತೇನೆ. ಪ್ರಜ್ವಲನನ್ನು ಸೋಲಿಸುತ್ತೇನೆ. ಬಿಜೆಪಿ ಕೋಮುವಾದಿ ಪಕ್ಷವೆಂದು ದೇವೇಗೌಡರು ಹೇಳಿದ್ದರು. ಈಗ ಅಪಮೈತ್ರಿ ಮಾಡಿಕೊಂಡಿದ್ದಕ್ಕೆ ಜೆಡಿಎಸ್ ನಿಂದ ಎಸ್ ತೆಗೆಯಿರಿ ಎಂದಿದ್ದಕ್ಕೆ ನನ್ನ ಗರ್ವ ಭಂಗ ಮಾಡಿ ಎನ್ನುತ್ತಾರೆ. ಆದರೆ, ನನಗೆ ಗರ್ವ ಇಲ್ಲವೆಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.