ಕಬ್ಬಿನ ಲಾರಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಾಗಿ ಇಬ್ಬರ ಸಾವು

148

ಪ್ರಜಾಸ್ತ್ರ ಸುದ್ದಿ

ಚಾಮರಾಜನಗರ: ಲಾರಿಗೆ ಅತಿಯಾಗಿ ಕಬ್ಬನ್ನು ತುಂಬಲಾಗಿದೆ. ಅದು ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಇಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಲಾರಿ ಚಾಲಕ ಹಾಗೂ ಕ್ಲೀನರ್ ಮೃತಪಟ್ಟಿದ್ದಾರೆ.

ಜಿಲ್ಲೆಯ ಗುಂಡಾಲ್ ಹತ್ತಿರ ಶನಿವಾರ ಈ ದುರಂತ ಸಂಭವಿಸಿದೆ. ಹೈಟೆನ್ಷನ್ ವಿದ್ಯುತ್ ತಂತಿಯ ಎತ್ತರವನ್ನು ನೋಡದೆ ಲಾರಿಗೆ ಕಬ್ಬು ತುಂಬಲಾಗಿದೆ. ನಂತರ ಲಾರಿ ತೆಗೆದುಕೊಂಡು ಹೋಗುವಾಗ ವಿದ್ಯುತ್ ತಂತಿಗೆ ತಗುಲಿ ಅಮಾಯಕರ ಪ್ರಾಣ ಹೋಗಿದೆ. ಕೊಳ್ಳೇಗಾಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!