ಮೈಸೂರು: ಹುಚ್ಚುನಾಯಿ ಕಚ್ಚಿರುವುದ್ರಿಂದ ಐವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಂಜನಗೂಡಿನ ದೇವರಿಮ್ಮನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ.
ವಿದ್ಯಾನಗರ ಬಡಾವಣೆಯಲ್ಲಿರುವ ಹಿಂದುಳಿದ ವರ್ಗದ ವಿದ್ಯಾರ್ಥಿನಿಯಲದ ಮುಂದೆ ಇರುವ ಮನೆ ಮುಂದೆ ಆಟವಾಡ್ತಿದ್ದ ಐವರು ಮಕ್ಕಳಿಗೆ ಹುಚ್ಚು ನಾಯಿ ಕಡೆದಿದೆ. 6 ವರ್ಷದ ವಿಧೀಶ, 5 ವರ್ಷದ ಶ್ರಾವಣಿ, 8 ವರ್ಷದ ನಿವೇದಿತಾ, 5 ವರ್ಷದ ಯೋಗಿತಾ ಹಾಗೂ 5 ವರ್ಷದ ಆಯುಷಿ ಅನ್ನೋ ಐವರು ಮಕ್ಕಳಿಗೆ ಹುಚ್ಚುನಾಯಿ ಕಚ್ಚಿದೆ.
ಮಕ್ಕಳ ಕೆನ್ನೆ, ಬೆನ್ನು, ಕಾಲುಗಳಿಗೆ ಕಚ್ಚಿದ್ದು ಗಂಭೀರ ಗಾಯಗಳಾಗಿವೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಇಲ್ಲದ ಕಾರಣಕ್ಕೆ ಮೈಸೂರಿಗೆ ಕಳಿಸಿಕೊಡಲಾಗಿದೆ. ಹುಚ್ಚುನಾಯಿ ಹಾವಳಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ಸಾರ್ವಜನಿಕರು ಸಾಕಷ್ಟು ಬಾರಿ ಹೇಳಿದ್ರೂ ಕೇಳಿಲ್ಲ. ಈಗ ಅನಾಹುತ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.