ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕರೋನಾ ಸೋಂಕು ದೃಢಪಟ್ರೂ ಜನರು ಮಾತ್ರ ಕ್ಯಾರೆ ಅಂತಿಲ್ಲ ಅನ್ನೋದಕ್ಕೆ ಈ ಫೋಟೋಗಳು ಸಾಕ್ಷಿ. ಹೊಸಪೇಟೆ ಸಹ ಹಾಟ್ ಸ್ಪಾಟ್ ಆಗುವ ಹಂತದಲ್ಲಿದೆ. ಹೀಗಿರುವಾಗ ಆಹಾರದ ಕಿಟ್ ಪಡೆಯಲು ಜನರು ಬಂದ ಸ್ಥಿತಿ ನಿಜಕ್ಕೂ ಶಾಕ್ ಆಗುತ್ತೆ.
ಸಚಿವ ಆನಂದ ಸಿಂಗ್ ಅವರು, ವಾರ್ಡ್ ನಂಬರ್ 23ರ ಸರ್ಕಾರಿ ಶಾಲೆಯಲ್ಲಿ ಆಹಾರ ಕಿಟ್ ನೀಡುವ ವೇಳೆ ಜನರು ಸಾಮಾಜಿಕ ಅಂತರವನ್ನ ಮರೆತು, ಜೀವವನ್ನೂ ಲೆಕ್ಕಿಸದೆ ನೂಕುನುಗ್ಗಲು ಮಾಡಿಕೊಂಡಿದ್ದಾರೆ. ಇದೆ ರೀತಿ ಎಸ್.ಆರ್ ನಗರದಲ್ಲಿಯೂ ಆಗಿದೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಸೇರಿದ್ದಾರೆ ಅಂದ್ರೆ, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣ್ತಿದೆ.
ಬಳ್ಳಾರಿಯಲ್ಲಿ 13 ಕೇಸ್ ದೃಢಪಟ್ಟಿವೆ. ಅದರಲ್ಲಿ 10 ಪ್ರಕರಣಗಳು ಹೊಸಪೇಟೆಯಲ್ಲಿಯೇ ಇವೆ. ಹೀಗಿದ್ರೂ ಜೀವದ ಹಂಗು ತೊರೆದು ನೂರಾರು ಜನ ಸೇರಿದ್ದಾರೆ. ಇಷ್ಟೊಂದು ಜನ ಇಲ್ಲಿ ಹಸಿದು ಕುಳಿತಿದ್ಯಾ? ಅಧಿಕಾರಿಗಳ ಯಡವಟ್ಟಾ? ಆಹಾರದ ಕಿಟ್ ನೀಡಿದ ಸಚಿವರು ಈ ಬಗ್ಗೆ ಸರಿಯಾಗಿ ಕ್ರಮ ತೆಗೆದುಕೊಳ್ಳದೆ ಇರೋದಾ? ಒಟ್ಟಿನಲ್ಲಿ ಈ ದೇಶದಲ್ಲಿ ಜನರಿಗೆ ಯಾವತ್ತೂ ಬುದ್ದಿ ಬರಲ್ಲ. ಇವರಿಗೆ ಆಗಾಗ ದಡಂ ದಶಗುಣಂ ಅನ್ನಬೇಕು.