ಬೆಂಗಳೂರು: ನೂತನ ಅರಣ್ಯ ಸಚಿವ ಆನಂದ್ ಸಿಂಗ್ ಅವರ ಖಾತೆ ಬದಲಾವಣೆ ಮಾಡಲು ಸ್ವತಃ ಸಚಿವರೆ ಸಿಎಂ ಬಿ.ಎಸ್ ಯಡಿಯೂರಪ್ಪನವರನ್ನ ಭೇಟಿಯಾಗಿ ಮಾತ್ನಾಡಿದ್ದಾರೆ. ಯಾಕಂದ್ರೆ, ಆನಂದ ಸಿಂಗ್ ವಿರುದ್ಧ ಅರಣ್ಯ ಇಲಾಖೆಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿವೆ. ಹೀಗಾಗಿ ಈ ಖಾತೆ ನೀಡಿದ ದಿನದಿಂದ ಇವರ ವಿರುದ್ಧ ವ್ಯಾಪಕ ಆಕ್ರೋಶ, ಟೀಕೆ ಕೇಳಿ ಬರ್ತಿವೆ.
ಮೊದಲು ಆಹಾರ ಖಾತೆ ನೀಡಲಾಗಿತ್ತು. ಬಳಿಕ ಪಟ್ಟು ಹಿಡಿದು ಅರಣ್ಯ ಇಲಾಖೆ ಪಡೆದುಕೊಂಡಿದ್ರು. ಇದೀಗ ಇದನ್ನ ಸಹ ಬದಲಾವಣೆ ಮಾಡಿ ಅಂತಿದ್ದಾರೆ. ಆನಂದ ಸಿಂಗ್ ವಿರುದ್ಧ ಕೇಸ್ ಗಳಿರುವಾಗ ಅರಣ್ಯ ಖಾತೆ ನೀಡಿರುವುದಕ್ಕೆ ಹೈಕಮಾಂಡ್ ಸಹ ಗರಂ ಆಗಿದೆ ಅಂತಾ ಹೇಳಲಾಗ್ತಿದೆ. ಇದ್ರಿಂದಾಗಿ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿರುವ ಸಚಿವ ಆನಂದ ಸಿಂಗ್ ಖಾತೆ ಬದಲಾವಣೆಗೆ ಮನವಿ ಮಾಡಿದ್ದಾರೆ. ಹೀಗಾಗಿ ಇವರ ಖಾತೆ ಬದಲಾಗುವ ಸಾಧ್ಯತೆಯಿದೆ ಅಂತಾ ಹೇಳಲಾಗ್ತಿದೆ.