ಥಾಣೆ: ಕ್ರೇನ್ ಬಿದ್ದು 16 ಕಾರ್ಮಿಕರ ಸಾವು

147

ಪ್ರಜಾಸ್ತ್ರ ಸುದ್ದಿ

ಥಾಣೆ: ಸಮೃದ್ಧಿ ಎಕ್ಸ್ ಪ್ರೆಸ್ ವೇನ 3ನೇ ಹಂತದ ಕಾಮಗಾರಿ ವೇಳೆ ಕ್ರೇನ್ ಕುಸಿದು ಬಿದ್ದ ಪರಿಣಾಮ ಬರೋಬ್ಬರಿ 16 ಕಾರ್ಮಿಕರು ಪ್ರಾಣ ಕಳೆದುಕೊಂಡ ದಾರುಣ ಘಟನೆ ಮಂಗಳವಾರ ನಡೆದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಥಾಣೆ ಜಿಲ್ಲೆಯ ಶಹಪುರದ ಸರ್ಲಾಂಭೆ ಗ್ರಾಮದ ಹತ್ತಿರ ಸಮೃದ್ಧಿ ಎಕ್ಸ್ ಪ್ರೆಸ್ ವೇನ ಕಾಮಗಾರಿಯ ವೇಳೆ ಸೇತುವೆಯ ಚಪ್ಪಡಿ ಮೇಲೆ ಕ್ರೇನ್ ಕುಸಿದು ಬಿದ್ದಿದೆ. ಇದರಿಂದಾಗಿ ದುರ್ಘಟನೆಯೊಂದು ನಡೆದಿದೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ತಂಡ ಕಾರ್ಯಾಚರಣೆಯಲ್ಲಿ ತೊಡಗಿದೆ.

ಇದು ಮುಂಬೈ-ನಾಗ್ಪುರ್ ಸಂಪರ್ಕಿಸುವ 701 ಕಿಲೋ ಮೀಟರ್ ಉದ್ದದ ಎಕ್ಸ್ ಪ್ರೆಸ್ ವೇ ಆಗಿದೆ. 2022ರ ಡಿಸೆಂಬರ್ ನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಈ ವರ್ಷದ ಡಿಸೆಂಬರ್ ವೊಳಗೆ ಕಾಮಗಾರಿ ಪೂರ್ತಿಯಾಗಲಿದೆ ಎಂದು ಸಿಎಂ ಶಿಂದೆ ಹೇಳಿದ್ದಾರೆ. ಇದುವರೆಗಿನ 600 ಕಿಲೋ ಮೀಟರ್ ಕಾಮಗಾರಿಯಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ನಿಜಕ್ಕೂ ದುರಂತವೇ ಸರಿ.




Leave a Reply

Your email address will not be published. Required fields are marked *

error: Content is protected !!