‘ದೇವಸ್ಥಾನ ಕಟ್ಟುವರು ಒಬಿಸಿ, ದಲಿತರು.. ಆಸ್ತಿ ಹೊಡೆಯುವವರು ನೀವು’

225

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇವಸ್ಥಾನ ಕಟ್ಟುವವರು ಓಬಿಸಿ, ದಲಿತರು. ಒಳಗೆ ಕುಳಿತು ಆಸ್ತಿ ಹೊಡೆಯುವವರು ನೀವು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಯಾರೂ ಶಾಶ್ವತವಲ್ಲ. ಕರ್ನಾಟಕ ಶಾಂತಿಯ ತೋಟ. ಅದನ್ನು ಹಾಳು ಮಾಡಬೇಡಿ ಎಂದು ಕೈಮುಗಿದು ಕೇಳುತ್ತೇನೆ ಎಂದಿದ್ದಾರೆ.

ಇವತ್ತು ವಾಟ್ಸಪ್ ನೋಡಿದೆ, ಹಣ್ಣು, ಕಿರಾಣಿ, ಎಲೆಕ್ಟ್ರಿಕ್, ಮಟನ್ ಅಂಗಡಿಗಳಿಗೆ ಹೋಗಬೇಡಿ ಅಂದಿದ್ದಾರೆ. ಸಭಾಧ್ಯಕ್ಷರು ಯಾವ ಪುರುಷಾರ್ಥಕ್ಕೆ ಚರ್ಚೆ ಇಟ್ಟುಕೊಂಡಿದ್ದಾರೆ. ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದಿದ್ದೀರಿ. ಇಂತಹ ವ್ಯಕ್ತಿಗಳನ್ನು ಬಹಿಷ್ಕರಿಸಿ ಎಂದು ಎಚ್ಡಿಕೆ ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!