ಅಬ್ಬರದ ಮಳೆ ತಂದ ಅವಾಂತರ

342

ಅಥಣಿ: ತಾಲೂಕಿನಾದ್ಯಂತ ನಿನ್ನೆ ಸಂಜೆ ಬಿರುಗಾಳಿ, ಸಿಡಿಲು ಮಿಂಚು ಸಮೇತ ಭರ್ಜರಿಯಾಗಿ ಮಳೆಯಾಗಿದೆ. ಇದರ ಪರಿಣಾಮ ಹಲವು ಕಡೆ ಮರಗಳು ಧರೆಗುರುಳಿವೆ. ಬೆಳೆಗಳು ಹಾಳಾಗಿವೆ. ಜಾನುವಾರುಗಳು ಸಾವನ್ನಪ್ಪಿದ ಘಟನೆ ನಡೆದಿದೆ.

ತಾಲೂಕಿನ ಕೋಹಳ್ಳಿ ಗ್ರಾಮದ ಚನ್ನಮಲ್ಲ ಮಂಟೂರ ಇವರ ತೋಟದಲ್ಲಿ, ಬಿರುಗಾಳಿಗೆ ಮರಗಿಡಗಳು ಎಮ್ಮೆ ಮೇಲೆ ಬಿದ್ದು ಸಾವನ್ನಪ್ಪಿದೆ. ಅಲ್ಲದೆ ಸುತ್ತಲಿನ ಮನೆಗಳ ಮೇಲಿನ ಛಾವಣಿ ಹಾರಿ ಹೋಗಿವೆ. ಹೀಗಾಗಿ ಈ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!