ಪ್ರಜಾಸ್ತ್ರ ಸುದ್ದಿ
ವಿಜಯಪುರ: ಹಿಜಾಬ್ ನಿಷೇಧ ವಾಪಸ್ ವಿಚಾರಕ್ಕೆ ಸಂಬಂಸಿದಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಮುಸ್ಲಿಂರ ಓಲೈಕೆಗೆ ನಿಂತಿದ್ದಾರೆ. 2ನೇ ಟಿಪ್ಪು ಸುಲ್ತಾನ್ ಆಗ್ತಿದ್ದಾರೆ ಎಂದು ಕಿಡಿ ಕಾರಿದರು.
ಅವರು ಹಿಜಾಬ್ ಧರಿಸಿ ಬರೋದಾರೆ ಹಿಂದೂಗಳು ಕೇಸರಿ ಶಾಲು, ತಿಲಕ ಇಟ್ಟುಕೊಂಡು ಬರುತ್ತಾರೆ. ಇದರಿಂದ ದೊಡ್ಡ ಸಂಘರ್ಷ ಆಗುತ್ತದೆ. ಹಿಜಾಬ್ ನಿಷೇಧ ಹಿಂದಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು ಅಲ್ಲ ಎಂದು ಯತ್ನಾಳ ಹೇಳಿದ್ದಾರೆ.