ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ, ಅಕ್ರಮ ಆಸ್ತಿ ಗಳಿಕೆ ಸಂಬಂಧ ಮೂರು ಪ್ರಕರಣ ದಾಖಲಾಗಿದ್ವು. ಇಂದು ಆ ಪ್ರಕರಣಗಳನ್ನ ಹಿಂದಕ್ಕೆ ಪಡೆಯಲಾಗಿದೆ. ಇದರೊಂದಿಗೆ ಸಿಎಂ ಸೇರಿದಂತೆ ಅವರ ಕುಟುಂಬಸ್ಥರು ಸೇಫ್ ಆಗಿದ್ದಾರೆ ಎನ್ನಬಹುದು.
ವಕೀಲ ಬಿ.ವಿನೋದ ಎಂಬುವರು ಸಿಎಂ ಸೇರಿ ಅವರ ಕುಟುಂಬಸ್ಥರ ವಿರುದ್ಧ ಮೂರು ಪ್ರಕರಣಗಳನ್ನ ದಾಖಲಿಸಿದ್ರು. ಈ ಸಂಬಂಧ ಇಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಬೇಕಿತ್ತು. ಆದ್ರೆ, ವಕೀಲ ಬಿ.ವಿನೋಧ, ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ಎದುರು ಹಾಜರಾಗಿ, ಪ್ರಕರಣ ವಾಪಸ್ ಪಡೆಯುವುದಾಗಿ ತಿಳಿಸಿದ್ರು. ಕೋರ್ಟ್ ಇದನ್ನ ಪುರಸ್ಕರಿಸಿದೆ.
ಹುಣಸೇಕಟ್ಟೆ, ಕೋಟೆಗಂಗೂರು ಹಾಗೂ ಕೆಎಚ್ ಬಿ ಕಾಲೋನಿಗಳಲ್ಲಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಶಿವಮೊಗ್ಗ ಮೂಲದ ವಕೀಲ ಬಿ.ವಿನೋದ ಪ್ರಕರಣ ದಾಖಲಿಸಿದ್ರು.