ಪ್ರಜಾಸ್ತ್ರ ಅಪರಾಧ ಸುದ್ದಿ
ವಿಜಯಪುರ: ಅನೈತಿಕ ಸಂಬಂಧದ ಸಂಶಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಇದಕ್ಕಾಗಿ 6 ಲಕ್ಷಕ್ಕೆ ಸುಪಾರಿ ಪಡೆದವರನ್ನ ಅರೆಸ್ಟ್ ಮಾಡಲಾಗಿದೆ. 4 ಜನ ಆರೋಪಿಗಳನ್ನ ಬಂಧಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಬಲೇಶ್ವರದ ಪೈಗಂಬರ ದಸ್ತಗಿರಿಸಾಬ ಗೋಕಾಂವಿ, ಪೈಗಂಬರ ರಾಜೇಸಾಹ ಕೋಲೂರ, ಸಾರವಾಡದ ಚಂದ್ರಕಾಂತ ಅಶೋಕ ಪುನ್ನಣ್ಣವರ, ಸಾಗರ ಹಣಮಂತ ಸಂಜೀವಗೋಳ ಬಂಧಿತ ಆರೋಪಿಗಳಾಗಿದ್ದಾರೆ.
ಈ ಆರೋಪಿಗಳ ಪೈಕಿ ಪೈಗಂಬರ ರಾಜೇಸಾಬ ಕೋಲೂರ ಎಂಬವನು, ತನ್ನ ಹೆಂಡತಿ ಪರ್ವಿನ್ ಳೊಂದಿಗೆ ಯಾಕೂಬ್ ಚಾಂದಬಾಶಾ ಕೋಲೂರ (24) ಈತನು ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಸಂಶಯಗೊಂಡಿದ್ದ. ಹೀಗಾಗಿ ಅವನ ಹತ್ಯೆಗಾಗಿ 6 ಲಕ್ಷಕ್ಕೆ ಸುಪಾರಿ ನೀಡಿದ್ದ.
ಯಾಕೂಬ್ ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ, ಸುತ್ತಾಡಿಸಿ, ಕೊಲ್ಹಾರದ ಕೃಷ್ಣಾ ನದಿ ಸೇತುವೆ ಬಳಿ ಕುತ್ತಿಗೆಗೆ ವೈರನಿಂದ ಬಿಗಿದು ಕೊಲೆ ಮಾಡಿ, ಬಳಿಕ ಮೃತದೇಹವನ್ನು ಸೇತುವೆ ಮೇಲಿಂದ ನದಿಗೆ ಎಸೆದು ಪರಾರಿಯಾಗಿದರು. ಈ ಬಗ್ಗೆ ಬಬಲೇಶ್ವರ ಠಾಣೆಯಲ್ಲಿ ಮೃತ ಯುವಕನ ತಂದೆ ಚಾಂದಬಾಶಾ 6 ಜನ ಆರೋಪಿಗಳ ವಿರುದ್ಧ ದೂರು ನೀಡಿದ್ರು. ಈ ಹಿನ್ನೆಲೆಯಲ್ಲಿ 4 ಜನರನ್ನು ಬಂಧಿಸಲಾಗಿದೆ.
ಕೃತ್ಯಕ್ಕೆ ಬಳಸಿದ್ದ ಕಾರು ಸೇರಿದಂತೆ ಸುಪಾರಿ ಹಣದಲ್ಲಿ ಖರೀದಿ ಮಾಡಿದ್ದ ಬೈಕ್ ಹಾಗೂ ಉಳಿದ 11,100 ರೂಪಾಯಿಗಳನ್ನ ಆರೋಪಿಗಳಿಂದ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.