ಪ್ರಜಾಸ್ತ್ರ ಸುದ್ದಿ
ನವದೆಹಲಿ: ಇಂದು 88ನೇ ವಾಯು ಸೇನಾ ದಿನಾಚರಣೆ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ವೀರ ಯೋಧರಿಗೆ ಶುಭ ಕೋರಿದ್ದಾರೆ.
ನಮ್ಮ ವಾಯು ಪಡೆಯ ವೀರ ಯೋಧರು, ಮಾಜಿ ಸೈನಿಕರು, ಅವರ ಕುಟುಂಬಸ್ಥರನ್ನ ಗೌರವದಿಂದ ಕಾಣುತ್ತೇವೆ. ಆಗಸವನ್ನ ಭದ್ರಪಡಿಸುವಲ್ಲಿ, ದೇಶದ ವಿಪತ್ತು ಪರಿಹಾರ ನಿರ್ವಹಣೆಯಲ್ಲಿ ನಾಗರಿಕರಿಗೆ ಐಎಎಫ್ ನೀಡುವ ಸಹಾಯ ಬಹುದೊಡ್ಡದು ಎಂದು ರಾಷ್ಟ್ರಪತಿ ಕೋವಿಂದ್ ಅವರು ಹೇಳಿದ್ದಾರೆ.
ಇನ್ನು ಪ್ರಧಾನಿ ಮೋದಿ ಟ್ವೀಟ್ ಮಾಡಿ, ವಾಯು ಪಡೆಯ ವೀರ ಯೋಧರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ದೇಶದ ಆಗಸವನ್ನ ಸುರಕ್ಷಿತವಾಗಿಡುವಲ್ಲಿ, ಭಾರತಾಂಬೆ ರಕ್ಷಿಸುವಲ್ಲಿ ನಿಮ್ಮ ಶೌರ್ಯ, ಧೈರ್ಯ ಸ್ಫೂರ್ತಿ ಎಂದು ಹೇಳಿದ್ದಾರೆ.