ಮೊದಲ ಪಂದ್ಯ ದೇವರಿಗೆ ಬಿಟ್ಟ ಆರ್ ಸಿಬಿ!

421

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮುಂಬೈ: ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಬರೋಬ್ಬರಿ 205 ರನ್ ಗಳಿಸಿದರು ಆರ್ ಸಿಬಿ ಪಂದ್ಯ ಸೋತಿದೆ. ನಾಯಕ ಡು ಪ್ಲಸಿ 88, ಮಾಜಿ ನಾಯಕಿ ಕೊಹ್ಲಿ 41, ದಿನೇಶ್ ಕಾರ್ತಿಕ್ 32 ರನ್ ಗಳ ಭರ್ಜರಿ ಆಟದಿಂದಾಗಿ 2 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು.

ಈ ಸ್ಕೋರ್ ನೋಡಿದ ಬೆಂಗಳೂರು ಫ್ಯಾನ್ಸ್ ಗೆಲುವು ನಮ್ಮದೆ ಅಂದುಕೊಂಡಿದ್ದರು. ಆದರೆ, ಮಯಾಂಕ್ ಅಗರ್ವಾಲ್ ಟೀಂ ಭರ್ಜರಿ ಬ್ಯಾಟಿಂಗ್ ಮಾಡಿ 19 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿ ಗೆಲುವು ಸಾಧಿಸಿತು.

ಧವನ್ 43, ರಾಜಪಕ್ಷಾ 43, ಮಯಾಂಕ್ 32, ಸುಲ್ತಾನ್ ಖಾನ್ 24, ಒಡೆನ್ ಸ್ಮಿತ್ 25 ರನ್ ಗಳ ಭರ್ಜರಿ ಆಟಿಂದಾಗಿ ಪಂಜಾಬ್ ಗೆಲುವು ಸಾಧಿಸಿತು. ಪಂಜಾಬ್ ಪರ 14 ಸಿಕ್ಸ್, 11 ಫೋರ್ ಗಳು ಬಂದಿವೆ. ಈ ಪಂದ್ಯ ಸೋತ ಆರ್ ಸಿಬಿ ಫ್ಯಾನ್ಸ್ ಮೊದಲ ಪಂದ್ಯ ದೇವರಿಗೆ ಬಿಟ್ಟಿದ್ದೇವೆ ಎಂದು ತಮ್ಮ ಎಂದಿನ ಡೈಲಾಗ್ ಹೊಡೆಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!