ರಾಜ್ಯಮಟ್ಟದ ಕಲಾ ಮೇಳ ರದ್ದು

247

ಪ್ರಜಾಸ್ತ್ರ ಸುದ್ದಿ

ನಾಗಮಂಗಲ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಪ್ರತಿ ವರ್ಷ ಆಯೋಜಿಸಿಕೊಂಡು ಬರುತ್ತಿದ್ದ ರಾಜ್ಯಮಟ್ಟದ ಜಾನಪದ ಕಲಾ ಮೇಳ ಈ ವರ್ಷ ರದ್ದು ಮಾಡಲಾಗಿದೆ. ಕೋವಿಡ್ 19ನಿಂದಾಗಿ ಜನರ ಆರೋಗ್ಯದ ದೃಷ್ಟಿಯಿಂದ ಈ ಬಾರಿ ಕಲಾ ಮೇಳ ರದ್ದುಗೊಳಿಸಲಾಗಿದೆ ಎಂದು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ತಿಳಿಸಿದ್ದಾರೆ

ಜಾನಪದ ಕಲೆ ಸಂಸ್ಕೃತಿಯನ್ನ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕಳೆದ 4 ದಶಕಗಳಿಂದ ಮೂರು ದಿನಗಳ ಕಾಲ ರಾಜಮಟ್ಟದ ಕಲಾ ಮೇಳ ಆಯೋಜಿಸಿಕೊಂಡು ಬರಲಾಗ್ತಿದೆ. ಪ್ರತಿ ವರ್ಷ ಸೆಪ್ಟೆಂಬರ್ 23 ರಿಂದ 25ರ ತನಕ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ಸುಮಾರು 20 ಸಾವಿರಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸ್ತಿದ್ವು. ಹೀಗಾಗಿ ಇಲ್ಲಿ ಜಾನಪದ ಲೋಕವೇ ಅನಾವರಣಗೊಳ್ಳುತಿತ್ತು. ಆದ್ರೆ, ಈ ಬಾರಿ ಕೋವಿಡ್ 19ನಿಂದಾಗಿ ರದ್ದಾಗಿದೆ.




Leave a Reply

Your email address will not be published. Required fields are marked *

error: Content is protected !!