ಬೆಂಗಳೂರು: ನವೆಂಬರ್ 1ರಿಂದ ಅಂಗಡಿ ಮುಂಗಟ್ಟುಗಳ ನಾಮಫಲಕವನ್ನ ಕಡ್ಡಾಯವಾಗಿ ಕನ್ನಡದಲ್ಲಿ ಬರೆಯಬೇಕೆಂದು ಬಿಬಿಎಂಪಿ ಆಯುಕ್ತರು ಖಡಕ್ ಆಗಿ ಹೇಳಿದ್ದು, ಇಲ್ಲದಿದ್ರೆ ಟ್ರೈಡ್ ಲೈಸನ್ಸ್ ರದ್ದು ಮಾಡುವುದಾಗಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕನ್ನಡ ಮಾಯವಾಗ್ತಿದೆ ಎಂದು ಪ್ರತಿಯೊಬ್ಬರು ಹೇಳ್ತಿದ್ದಾರೆ. ಕನ್ನಡಪರ ಸಂಘಟನೆಗಳು ಆಗಾಗ ಪ್ರತಿಭಟನೆ ಮಾಡುತ್ತಲೇ ಇವೆ. ಇದೀಗ ಬಿಬಿಎಂಪಿ ಆಯುಕ್ತ ಅನಿಲಕುಮಾರ ಖಡಕ್ ಆಗಿ ಆದೇಶ ಹೊರಡಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತೆ ಅನ್ನೋದು ಕಾದು ನೋಡಬೇಕು.